ಪ್ರಜಾಪ್ರಭುತ್ವ ಅನ್ನೋ
ಪದವನ್ನು ತಪ್ಪಾಗಿ ಬರೆಯಲಾಗುತ್ತಿದೆಯಾ? ಅದು
ಪ್ರಜಾ-
ಪ್ರಭುತ್ವ ಅಂತಾಗಿದ್ದರೆ ವಾಸ್ತವಕ್ಕೆ ಹತ್ತಿರವಾಗುತ್ತಿತ್ತು. ಪ್ರಜೆಗಳ ಲಿಸ್ಟಿನಿಂದ ಪ್ರಭುಗಳನ್ನು ಮೈನಸ್
ಮಾಡಿ
ಬೇರ್ಪಡಿಸಿ ನೋಡಿದರೆ ಒಳಿತು.
ರಾಜ
ಪ್ರಭುತ್ವದಲ್ಲಿ ಒಬ್ಬ
ರಾಜ
ಹಾಗೂ
ಆತನ
ಪರಿವಾರದ ಭಾರವನ್ನು ಜನರು
ಹೊತ್ತರೆ ಸಾಕಿತ್ತು. ಈಗಿನ
ಪ್ರಜಾ-
ಪ್ರಭುತ್ವದಲ್ಲಿ ರಾಜರಿಲ್ಲ ಎಲ್ಲಾ
ಮಂತ್ರಿಮಾನ್ಯರೇ ಆದರೂ
ಒಬ್ಬೊಬ್ಬರ ದವಲತ್ತು ಯಾವ ರಾಜರಿಗೂ ಕಡಿಮೆ
ಇಲ್ಲ.
2016ರ ನವೆಂಬರ್ 21 ರಿಂದ
ಬೆಳಗಾವಿಯಲ್ಲಿ ಈ
ರಾಜರಲ್ಲದ ರಾಜರುಗಳ ಹತ್ತು
ದಿನದ
ಅಧಿವೇಶನವೆಂಬ ದರ್ಭಾರ್ ನಡೆಯಿತಲ್ಲಾ.. ಆಗ
ಊಟ
ವಸತಿಗೆ
ಅಬ್ಬಬ್ಬಾ ಅಂದ್ರೆ
ಎಷ್ಟು
ಖರ್ಚಾಗಿರಬೋದು..? ಒಂದು
ಇಲ್ಲವೇ
ಎರಡು
ಕೋಟಿ..!
ಇಲ್ಲಾ
ನಿಮ್ಮ
ಊಹೆ
ತಪ್ಪು... ತಿಂದುಂಡಿರಲು ಒಟ್ಟಾರೆ ಏಳೂಕಾಲು ಕೋಟಿ ಎಂದರೆ ನಂಬಲೇಬೇಕು. ಅರೆ..!
ಅಧಿವೇಶನದಲ್ಲಿ ಕಾಲು
ಭಾಗದಷ್ಟು ಜನಪ್ರತಿನಿಧಿಗಳೆನ್ನೋರೂ ಇರಲಿಲ್ಲ... ಇಷ್ಟೊಂದು ತಿನ್ನೋಕೆ ಹೇಗೆ
ಸಾಧ್ಯ
ಅನ್ನೋದು ನಿಮ್ಮ
ಹಾಗೆಯೇ
ನನ್ನದೂ
ಪ್ರಶ್ನೆ... ಅದರೆ
ಇದು
ಸತ್ಯ.
ಒಬ್ಬರಿಗೆ ಒಂದು
ದಿನದ
ಹೋಟೇಲ್
ರೂಂ
ಬಿಲ್
ಎಷ್ಟು
ಗೊತ್ತಾ?
ಕೇವಲ
ಹತ್ತೊಂಬತ್ತೇ ಸಾವಿರ.
ಇದೇ
ಹಣ
ಕೊಟ್ಟಿದ್ದರೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಉತ್ತಮ
ಲಾಜಿಂಗ್ ನಲ್ಲಿ
ಇಪ್ಪತ್ತು ಎಸಿ
ಡಿಲಕ್ಸ್ ರೂಂ.
ಸಿಗ್ತಿದ್ದವು. ಆದರೆ
ಮಂತ್ರಿಮಾನ್ಯರುಗಳೆಂದರೆ ಸಾಮಾನ್ಯವೇ..? ಈ
ಮಾರಾಜರುಗಳ ಒಂದೊತ್ತಿನ ಬ್ರೇಕ್
ಪಾಸ್ಟ್
ಕೇವಲ
ಐನೂರುಪಾಯಿ ಆದರೆ,
ಒಂದೊತ್ತಿನ ಊಟ ಬರೀ
ಮೂರು
ಸಾವಿರ
ಅಷ್ಟೇಯಾ?
ಅಯ್ಯೋ
ಇವರ
ಮನೆ
ಕಾಯ್ವೋಗಾ.... ಈ
ಮೂರು
ಸಾವಿರ
ಕೊಟ್ರೆ
ನಾಲ್ಕು
ಜನರ
ಒಂದಿಡೀ
ಕುಟುಂಬಕ್ಕೆ ಒಂದು
ತಿಂಗಳು
ತಿನ್ನೊವಷ್ಟು ದಿನಸಿ
ಬರ್ತಿತ್ತಲ್ಲಾ. ಆದರೆ
ಕೇಳೋರಾರು...? ಎಷ್ಟೇ
ಆದ್ರು
ನಾವೇ
ಓಟೊತ್ತಿ ಕಳ್ಸಿದವರಲ್ವೇ? ಆದರೂ ಕೇಳೇಬಿಡೋವಾ ಅಂತಂದ್ರೆ ಇಲೆಕ್ಷನ್ ಟೈಂನಾಗೆ ಹಣ
ಹೆಂಡಾ
ಇಸ್ಕೊಂಡೇ ಓಟು
ಮಾರ್ಕೊಂಡೋರು ಇದ್ದಾರಲ್ಲಾ... ಅವರ್ಗೆಲ್ಲಿದೆ ಕೇಳೋಕೆ
ಬಾಯಿ?
ಇನ್ನು
ಕೆಲವರಂತೂ ಚುನಾವಣೆಗೂ ನಮಗೂ
ಸಂಬಂಧವೇ ಇಲ್ಲಾಂತ ಓಟು
ಒತ್ತೋಕೂ ಬರದೇ
ಇರ್ತಾರಲ್ಲಾ ಅವರಿಗೆಲ್ಲಿದೆ ಎತ್ತರಿಸಿ ಕೇಳೋ
ದ್ವನಿ..
ಮತ್ತೊಂದಿಷ್ಟು ಮಾಜನತೆ
ಜಾತಿ
ಧರ್ಮ
ಅಂತೆಲ್ಲಾ ಓಟ್ ಒತ್ತಿದ್ರಲ್ಲಾ ಅಂತವ್ರಿಗೆಲ್ಲಿದೆ ಹಿಡಿದು
ಪ್ರಶ್ನಿಸೋ ನೈತಿಕತೆ? ಈಟೆಲ್ಲಾ ಜನರ
ಹಣ
ಪೋಲಾದ್ರೂ ಈ
ಹೋರಾಟಗಾರರು... ಸಂಘಟನೆಗಳೂ... ಸಾಹಿತಿಗಳು.. ಎಡಪಕ್ಷಗಳೂ ಸುಮ್ಕೆ
ಇದ್ದಾವಲ್ಲಾ... ಯಾಕೆಂದರೆ ಅವರಲ್ಲೂ ಸರಕಾರಗಳ ಫಲಾನುಭವಿಗಳೇ ಹೆಚ್ಚಿದ್ದಾರಲ್ಲಾ ಅದಕ್ಕೆ
ಅವರ
ಬಾಯಿ
ಕೂಡಾ
ಬಂದ್.
ಇನ್ನು
ಮಿಕ್ಕವರೋ 'ನಮಗ್ಯಾಕೆ ಊರ
ಉಸಾಬರಿ'
ಅನ್ನೋರು. ಹಿಂಗಾಗಿದ್ದಕ್ಕೆ ಅವ್ರು
ಹಂಗಾಡೋದು. ಪ್ರಭುಗಳು ಹಂಗಂಗಾಡೋದಕ್ಕೆ ಕಾರಣಾನೇ ಪ್ರಜೆಗಳ ನಿರ್ಲಿಪ್ತತೆ ಹಾಗೂ ನಿರಾಸಕ್ತಿಗಳು.
ಕೇಳೋರೇ
ಇಲ್ಲಾ
ಅಂದ್ಮೇಲೆ ದೇವರಿಗೆ ಬಿಟ್ಟ
ಗೂಳಿಗಳನ್ನ ಕೇಳಬೇಕೆ. ಸಿಕ್ಕ
ಸಿಕ್ಕಲ್ಲೆಲ್ಲಾ ಸಿಕ್ಕಿದ್ದನ್ನ ಮೇಯ್ತಾವೆ. ಎಲ್ಲಾ
ನಮೂನಿ
ಪಕ್ಷ
ಹಾಗೂ
ಸರಕಾರಗಳೂ ಮಾಡೋದು
ಇದನ್ನೇ...(ಎಲ್ಲೋ ಅಪವಾದಗಳೂ ಇವೆಯಾದರೂ ಅಂತವರು
ಅಪರೂಪ)
ಎಲ್ಲಿವರೆಗೂ ಎಲ್ಲವನ್ನೂ ಸಹಿಸಿಕೊಂಡು ಜನತೆ
ನಿರ್ಲಿಪ್ತರಾಗಿರುತ್ತಾರೋ ಅಲ್ಲಿವರೆಗೂ ಈ
ದೊರೆಗಳು ಜನರ
ಶ್ರಮ
ಸಂಪನ್ಮೂಲಗಳನ್ನ ದೋಚ್ತಾನೇ ಇರ್ತಾರೆ. ಎಲ್ಲಿವರೆಗೂ ಸಂಘಟಿತ
ಹೋರಾಟಗಳೂ ಸಹ
ಸ್ವಾರ್ಥ ಹಿತಾಸಕ್ತಿಗಾಗಿ ನಡೆಯುತ್ತವೋ ಅಲ್ಲಿವರೆಗೂ ಆಳುವವರು ಆ
ಸಂಘಟನೆಗಳ ನಾಯಕರಿಗೂ ಒಂದಷ್ಟು ಪಾಲು
ಕೊಟ್ಟು
ಹೋರಾಟಗಳನ್ನು ತಣ್ಣಗಾಗಿಸುತ್ತಾರೆ. ಇನ್ನು
ಪ್ರಜ್ಞಾವಂತರಾದ ಮುಂಚೂಣಿ ಬುದ್ದಿಜೀವಿಗಳು ಹಾಗೂ
ಸಾಹಿತಿ
ಕಲಾವಿದರುಗಳೂ ಸಹ
ಒಂದೊಂದು ಪಕ್ಷ-
ಸರಕಾರಕ್ಕೆ ಬದ್ದತೆ
ತೋರಿ
ಪ್ರಶಸ್ತಿ, ಪದವಿ,
ಪುರಸ್ಕಾರಗಳಿಗೆ ತೃಪ್ತರಾಗುತ್ತಾರೆ . ಪ್ರಸ್ತುತ ಸೋ
ಕಾಲ್ಡ್
ಪ್ರಜಾ-
ಪ್ರಭುತ್ವದ ದುಸ್ಥಿತಿ ಹೀಗಿರುವಾಗ ಈ
ದೇಶ
ಸರ್ವತೋಮುಖವಾಗಿ ಉದ್ದಾರ
ಆಗಬೇಕೆಂದರೆ ಹೇಗೆ
ಸಾಧ್ಯ?
ಸರ್ವೇ
ಜನ
ಸುಖಿನೋ
ಭವಂತು
ಎಲ್ಲಿಂದ ಸಾಧ್ಯ?
ಎಲ್ಲಿವರೆಗೂ ಆಸೆ
ಆಮಿಷಕ್ಕೊಳಗಾಗದೇ, ಜಾತಿ
ಧರ್ಮಗಳ
ಮೋಹಕ್ಕೊಳಗಾಗದೇ, ಬಹುಜನರು ಪ್ರಭುಗಳ ಜನವಿರೋಧಿತನಗಳ ವಿರುದ್ಧ ಸಂಘಟಿತ
ಜನಾಲೋಂದನ ಮಾಡುವುದಿಲ್ಲವೋ ಅಲ್ಲಿವರೆಗೂ ಆಳುವವರು ನಡೆದದ್ದೇ ದಾರಿ.
ಪ್ರಜಾಪ್ರಭುತ್ವ ಎನ್ನುವುದು ಕೇವಲ
ಹೆಸರಿಗೆ ಮಾತ್ರಾರೀ....!!
-±À²PÁAvÀ AiÀÄqÀºÀ½î
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ