ಬೆಳಗಾವಿ ಅಧಿವೇಶನದಲ್ಲಿ ಈ
ನಮ್ಮ
ಮಂತ್ರಿ
ಮಹೋದಯ ಶಾಸಕರುಗಳು ಹತ್ತೇ
ದಿನ
ಇದ್ದು
ತಿಂದುಂಡ ಖರ್ಚು
ಏಳೂಕಾಲು ಕೋಟಿ
ಎಂಬುದನ್ನು ಕೇಂದ್ರವಾಗಿಟ್ಟುಕೊಂಡು ಪ್ರಜಾಪ್ರಭುತ್ವದ ಪ್ರಸ್ತುತ ಪರಿಸ್ಥಿತಿಯನ್ನು ವಿಶ್ಲೇಷಿಸಿ “ಪ್ರಭುಗಳ ಭೋಜನ ಹಾಗೂ ಪ್ರಜೆಗಳ
ನಿರ್ಲಿಪ್ತನ” ಎನ್ನುವ ಲೇಖನ ಬರೆದಿದ್ದೆ.
ಈ
ಲೇಖನ
ಓದಿ
ಯಾರಿಗೆ
ಎಷ್ಟು
ತಲ್ಲಣವಾಯ್ತೋ ಗೊತ್ತಿಲ್ಲ. ಆದರೆ
ಹಿರಿಯ
ರಂಗಕರ್ಮಿಗಳಾದ ರಂಗಸಂಪದ ಲೋಕೇಶರು ಮಾತ್ರ ಭಾರೀ ತಳಮಳದಿಂದ ಪೋನಾಯಿಸಿದರು. ‘ಚುನಾವಣೆಗಳು ಮುಂದಿರುವಾಗ ಕಾಂಗ್ರೆಸ್ ಸರಕಾರವನ್ನು ಬೈದು
ಬರೆಯುವುದು ಸೂಕ್ತವಲ್ಲ’ ಎಂದರು.
ಹಾಗಂತ
ಲೋಕೇಶರವರು ಕಾಂಗ್ರೆಸ್ ಪಕ್ಷದವರೂ ಅಲ್ಲಾ,
ಕಾಂಗ್ರೆಸ್ ಸಪೋರ್ಟರ್ ಕೂಡಾ
ಅಲ್ಲವೇ
ಅಲ್ಲ.
'ಕೋಮುವಾದಿ ದೇಶಭಕ್ತರು ಸಂಘಟಿತರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ಸನ್ನು ಟೀಕಿಸುವುದೆಂದರೆ ಕೋಮುಶಕ್ತಿಗಳಿಗೆ ಬಲ
ತುಂಬಿದಂತೆ' ಎಂಬುದು
ಅವರ
ಆತಂಕಕ್ಕೆ ಕಾರಣವಾಗಿತ್ತು. ಅವರ
ಮಾತಲ್ಲೂ ಒಂದು
ರೀತಿಯ
ತರ್ಕ
ಇದ್ದೇ
ಇದೆ.
ದೊಡ್ಡದೊಂದು ಸಾಂಕ್ರಾಮಿಕ ವ್ಯಾಧಿಯನ್ನು ತಡೆಗಟ್ಟಲು ಚಿಕ್ಕ
ಪುಟ್ಟ
ಅಲರ್ಜಿಗಳನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಇದು
ಲೊಕೇಶರವರೊಬ್ಬರ ತಹ
ತಹ
ಅಲ್ಲಾ...
ಬಹುತೇಕ ಪ್ರಗತಿಪರ ವ್ಯಕ್ತಿಗಳು ಹಾಗೂ ಸಂಘಟನೆಗಳ ಸಧ್ಯದ
ತಳಮಳವಾಗಿದೆ.
ಯಾಕೆಂದರೆ...ಇಡೀ
ದೇಶದಲ್ಲಿ ಮನುವಾದಿ ಕೋಮುಶಕ್ತಿಗಳು ತಮ್ಮ
ವಿಕ್ಷಿಪ್ತ ವಿನಾಶಕಾರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ಹುಸಿ
ದೇಶಭಕ್ತಿ ಹಾಗೂ
ಅಚ್ಚೆ
ದಿನ್
ಭ್ರಮೆಗಳಲ್ಲಿ ಜನರನ್ನು ಮರುಳುಮಾಡುತ್ತಲೇ ಕೇಂದ್ರ
ಸರಕಾರದ
ಆಡಳಿತವನ್ನೇ ವಶಪಡಿಸಿಕೊಂಡಿವೆ. ಒಂದೊಂದೇ ರಾಜ್ಯಗಳ ಅಧಿಕಾರವನ್ನು ಆಪೋಷಣ
ಪಡೆದುಕೊಳ್ಳುತ್ತಿವೆ. ಕರ್ನಾಟಕದಲ್ಲೂ ಅದೇ
ಮೋದಿ
ಮೇನಿಯಾವನ್ನು ಹುಟ್ಟು
ಹಾಕಿ
ರಾಜ್ಯಾಡಳಿತ ಪಡೆಯಲು
ಶತಾಯ
ಗತಾಯ
ಪ್ರಯತ್ನಿಸುತ್ತಿವೆ.
ಪ್ರಸ್ತುತ ಕರ್ನಾಟಕದಲ್ಲಿ ಆಡಳಿತದ
ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರಕಾರ
ಏನೆಲ್ಲಾ ಜನಪರ
ಕೆಲಸಗಳನ್ನು ಮಾಡಿದರೂ ಅವುಗಳನ್ನೆಲ್ಲಾ ಮರೆಸಿ
ಮತೀಯ
ಉನ್ಮಾದದ ವಿಷವನ್ನು ಜನರಲ್ಲಿ ತುಂಬಿ
ಚುನಾವಣೆ ಗೆಲ್ಲುವುದು ಬಿಜೆಪಿ
ಪಕ್ಷದ
ಗುರಿಯಾಗಿದೆ. ವಾಸ್ತವಕ್ಕಿಂತಾ ಅವಾಸ್ತವ ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಕೈಂಕರ್ಯ ಮನುವಾದಿಗಳಿಗೆ ರಕ್ತಗತವಾಗಿ ಅವರ
ವೈದಿಕ
ಪರಂಪರೆಯಿಂದಾ ಬಳುವಳಿಯಾಗಿ ಬಂದಿದೆ.
ಕಳ್ಳರು
ಸುಳ್ಳರು ಲಂಚಬಾಕರು ಭ್ರಷ್ಟರು ಎಂದು
ಕಾಂಗ್ರೆಸ್ಸನ್ನು ಆಡಿಕೊಳ್ಳಬಹುದು. ಆದರೆ
ಅವೆಲ್ಲಕ್ಕಿಂತಲೂ ಅಪಾಯಕಾರಿಯಾದದ್ದು ಈ
ಮತೀಯತೆಯ ಉನ್ಮಾದ
ಹಾಗೂ
ಮನುವಾದಿತನ. ಕಾಂಗ್ರೆಸ್ ಸರಕಾರವನ್ನು ಜನಹೋರಾಟಗಳ ಮೂಲಕ
ಮಣಿಸಬಹುದು. ಆದರೆ
ಈ
ಸಂಘ
ಪರಿವಾರದ ಪ್ಯಾಸಿಸ್ಟ್ ಸರಕಾರವನ್ನು ಹೋರಾಟ
ಪ್ರತಿಭಟನೆಗಳಿಂದ ಮಣಿಸುವುದು ಕಷ್ಟಸಾಧ್ಯ. ಕಾಂಗ್ರೆಸ್ಸಿಗರು ‘ಜಾತಿ
ರಾಜಕೀಯ
ಮಾಡಿದ್ದಾರೆ... ಅಲ್ಪಸಂಖ್ಯಾತರನ್ನು ಓಲೈಸಿದ್ದಾರೆ’ ಎನ್ನುವುದು ಎಷ್ಟು
ಸತ್ಯವೋ
ಅಷ್ಟೇ
ಸತ್ಯ
ಈ
ಸಂಘಿಗಳು ಜಾತಿಗಳನ್ನು ಒಡೆದಿರುವುದು ಹಾಗೂ
ಹಿಂದುತ್ವದ ಹೆಸರಲ್ಲಿ ಅಲ್ಪಸಂಖ್ಯಾತರ ವಿರುದ್ಧ ಮತಾಂಧತೆಯನ್ನು ಕೆರಳಿಸಿರುವುದು. ಚುನಾವಣೆ ಗೆಲ್ಲುವುದು ಹಾಗೂ
ಅಧಿಕಾರವನ್ನು ಪಡೆದು
ದೇಶವಾಳುವುದು ಮಾತ್ರ
ಕಾಂಗ್ರೆಸ್ಸಿನ ಗುರಿಯಾಗಿದೆ. ಆದರೆ
ಇದರೊಂದಿಗೆ ಇಡೀ
ದೇಶದಲ್ಲಿ ಏಕ
ಭಾಷೆ,
ಏಕ ಸಂಸ್ಕೃತಿಯನ್ನು ಜಾರಿಗೊಳಿಸಿ ವೈದಿಕಶಾಹಿ ವರ್ಣವ್ಯವಸ್ಥೆಯನ್ನು ಅನುಷ್ಟಾನಗೊಳಿಸುವುದು ಸಂಘ
ಪರಿವಾರದ ಹಿಡನ್
ಅಜೆಂಡಾ
ಆಗಿದೆ.
ಭಾರತದ
ಸಂವಿಧಾನದ ಚೌಕಟ್ಟಿನೊಳಗೆ ಕಾಂಗ್ರೆಸ್ ತನ್ನ
ಆಡಳಿತವನ್ನು ಸಾಧ್ಯವಾದಷ್ಟೂ ನಡೆಸುತ್ತಲೇ ಬಂದಿದ್ದರೆ, ಈ
ಸಂಘ
ಪರಿವಾರದ ಕೃಪಾಪೋಷಿತ ಬಿಜೆಪಿಯು ಸಂವಿಧಾನವನ್ನು ನಿಧಾನವಾಗಿ ನಿರಾಕರಿಸುತ್ತಾ ಅಂತಿಮವಾಗಿ ಮನುಸ್ಮೃತಿಯನ್ನೇ ಈ
ದೇಶದ
ಸಂವಿಧಾನವನ್ನಾಗಿಸುವ ಒಳಹುನ್ನಾರವನ್ನು ಹೊಂದಿದೆ.
ಆದ್ದರಿಂದ.. ಈ
ದೇಶವನ್ನು ಮನುವಾದಿಗಳಿಂದ ರಕ್ಷಿಸಲು, ಈ
ದೇಶದ
ಜನರನ್ನು ಮತಾಂಧರ
ಕಪಿಮುಷ್ಟಿಯಿಂದ ಕಾಪಾಡಲು, ಈ
ದೇಶವನ್ನು ಧರ್ಮನಿರಪೇಕ್ಷಿತವಾಗಿ ಕಟ್ಟಲು
ನಮಗೆ
ಪರ್ಯಾಯ
ಜನಶಕ್ತಿಯ ಅಗತ್ಯವಿದೆ. ಆದರೆ
ಮನುವಾದಿಗಳನ್ನು ಎದುರಿಸುವ ಸಶಕ್ತ ಪರ್ಯಾಯಗಳಲ್ಲಿ ಅನಿವಾರ್ಯವಾಗಿ ಕಾಂಗ್ರೆಸ್ ಒಂದೇ
ಈಗಿನ
ಆಯ್ಕೆಯಾಗಿದೆ. ದೇಶಾದ್ಯಂತ ಈಗಲೂ
ಕಾಂಗ್ರೆಸ್ಸಿಗೆ ಮಾನ್ಯತೆ ಇದೆ.
ಕಾಂಗ್ರೆಸ್ ಮಾತ್ರ
ಬೇರೆಲ್ಲಾ ಬಿಜೇಪಿಯೇತರ ಪ್ರಾದೇಶಿಕ ಪಕ್ಷ
ಹಾಗೂ
ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಹೋಗುವ
ಸಾಧ್ಯತೆಗಳಿವೆಯೆಂದು ಬಹುತೇಕ
ಪ್ರಗತಿಪರರು ನಂಬಿದ್ದಾರೆ. ಅನೇಕಾನೇಕ ಪ್ರಗತಿಪರ ಪ್ರಜ್ಞಾವಂತರು ಇಂದು
ಕಾಂಗ್ರೆಸ್ಸನ್ನು ಬೆಂಬಲಿಸುತ್ತಿರುವುದು ಅದರ
ಮೇಲಿನ
ಪ್ರೀತಿಯಿಂದ ಅಲ್ಲವೇ ಅಲ್ಲ.
ಸಂಘ
ಪರಿವಾರದ ಪ್ಯಾಸಿಸ್ಟ್ ಆಡಳಿತದ
ಅಪಾಯಗಳ
ಅರಿವಿದ್ದದ್ದರಿಂದ ಅನಿವಾರ್ಯವಾಗಿ ಕಾಂಗ್ರೆಸ್ ಸಪೋರ್ಟ
ಮಾಡಬೇಕಾಗಿ ಬಂದಿದೆ.
ಕಾಂಗ್ರೆಸ್ ತನ್ನ
ಸ್ವಯಂಕೃತ ಅಪರಾಧಗಳಿಂದಾಗಿ ತನ್ನ
ಶಕ್ತಿ
ಹಾಗೂ
ಸಾಮರ್ಥ್ಯವನ್ನು ಎರಡು ದಶಕಗಳಿಂದ ಕಳೆದುಕೊಳ್ಳುತ್ತಾ ಬಂದಿದೆ.
ಕೋಮುವಾದಿಗಳು ಬಾಲ
ಬಿಚ್ಚಿದಾಗೆಲ್ಲಾ ನಿರ್ದಾಕ್ಷಿಣ್ಯವಾಗಿ ಕಾನೂನು
ಕ್ರಮ
ತೆಗೆದುಕೊಂಡು ಸಂಘಪರಿವಾರದ ಚೇಲಾಗಳ
ಬಾಲಗಳನ್ನು ಕತ್ತರಿಸುತ್ತಾ ಬಂದಿದ್ದರೆ ಆ
ಜನವಿರೋಧಿ ಶಕ್ತಿಗಳು ಇಷ್ಟೊಂದು ಹೆಚ್ಚಿಕೊಳ್ಳುತ್ತಿರಲಿಲ್ಲಾ. ಬಾಬರಿ
ಮಸೀದಿ
ದ್ವಂಸವಾದಾಗ, ಗುಜರಾತಲ್ಲಿ ಮಾರಣ
ಹೋಮ
ನಡೆದಾಗ, ಮಹಾರಾಷ್ಟ್ರದಲ್ಲಿ ಶಿವಸೇನೆ ಉಪದ್ರವ ಕೊಟ್ಟಾಗ, ಅದರ
ರೂವಾರಿಗಳನ್ನೆಲ್ಲಾ ಸಾಮೂಹಿಕವಾಗಿ ಶಿಕ್ಷಿಸಿ ಜನರಿಗೆ
ಅವರ
ಉನ್ಮಾದ
ರಾಜಕಾರಣವನ್ನು ತಿಳಿಸಿದ್ದರೆ ಇವತ್ತು
ಸಂಘಿಗಳು ಸಿಂಹಾಸನವೇರಲು ಸಾಧ್ಯವೇ ಇರುತ್ತಿರಲಿಲ್ಲ.
ಆಗಿದ್ದೆಲ್ಲಾ ಆಗಿ
ಹೋಗಿದೆ.
ಈಗ
ಹೇಗೆ
ಈ
ಮನುವಾದಿಗಳ ಅಶ್ವಮೇಧದ ಯಾಗದ
ಕುದುರೆಯನ್ನು ಕಟ್ಟಿಹಾಕುವುದು ಎಂಬುದರತ್ತ ಪ್ರತಿತಂತ್ರಗಾರಿಕೆ ಹೆಣೆಯಬೇಕಿದೆ. ಕರ್ನಾಟಕದಲ್ಲಿ ಒಂದು
ಪ್ರಾದೇಶಿಕ ಪಕ್ಷದಿಂದ ಇಲ್ಲವೇ
ಎಡಪಕ್ಷಗಳಿಂದ ಕೊಬ್ಬಿ
ನಿಂತ ಮತಾಂಧ ಕುದುರೆಯನ್ನು ಕಟ್ಟಿ
ಹಾಕುವುದು ಸಾಧ್ಯವಿಲ್ಲ. ಹಾಗಾಗಿ
ಇರುವುದರಲ್ಲೇ ಒಂದಿಷ್ಟು ಜನಪರವಾಗಿ ಕೆಲಸ
ಮಾಡಿರುವೆ ಎಂದು
ಹೇಳಿಕೊಳ್ಳುವ ಹಾಲಿ
ಕಾಂಗ್ರೆಸ್ ಸರಕಾರಕ್ಕೆ ಕಾಂಗ್ರೆಸ್ಸೇತರ ಪ್ರಜ್ಞಾವಂತರು ಬೇರೆ ದಾರಿಯಿಲ್ಲದೇ ಬೆಂಬಲಿಸುತ್ತಿದ್ದಾರೆ. ಕೋಮುವಾದಿ ಮುಖವಾಡಿತ ಸರಕಾರಕ್ಕಿಂತ ಜ್ಯಾತ್ಯಾತೀತ ಮುಖವಾಡದ ಕಾಂಗ್ರೆಸ್ ಅಂತವರೆಲ್ಲರ ಅನಿವಾರ್ಯ ಆಯ್ಕೆಯಾಗಿದೆ.
ಈ
ಗಂಬೀರವಾದ ವಿಚಾರದ
ಲೇಖನದಲ್ಲಿ ಒಂದು
ಜೋಕ್
ನೆನಪಾಗುತ್ತಿದೆ. ಒಬ್ಬ
ಅಂಗಡಿಗೆ ಹೋಗಿ
ಒಂದು
ಪ್ಯಾಕ್
ಸಿಗರೇಟ್ ಕೊಡಲು
ಕೇಳುತ್ತಾನೆ. ಅಂಗಡಿಯಾತ ಗಿರಾಕಿಯನ್ನು ರೇಗಿಸಲು ‘ಏಡ್ಸಿನ
ಸಿಗರೇಟ್ ಪ್ಯಾಕ್
ಇದೆ
ಕೊಡ್ಲಾ’ ಎಂದು
ಕೇಳುತ್ತಾನೆ. ಆಗ ವಿಪರೀತ ಆತಂಕಗೊಂಡ ಗಿರಾಕಿ
" ಹೇ
ಅದಲ್ಲಾರೀ...ನಂಗೆ
ಆ
ಕ್ಯಾನ್ಸರಿನದ್ದು ಸಿಗರೇಟ್ ಕೊಡಿ"
ಎನ್ನುತ್ತಾನೆ. ಆತನಿಗೆ
ಏಡ್ಸಿಗಿಂತಾ ಕ್ಯಾನ್ಸರ್ ತರುವ
ಸಿಗರೇಟೆ ಪರ್ಯಾಯ
ಆಯ್ಕೆಯಾಗಿದೆ. ಈಗ
ಯಾರನ್ನಾದ್ರೂ ಕ್ಯಾನ್ಸರ್ ಮತ್ತು
ಏಡ್ಸ
ರೋಗದಲ್ಲಿ ಯಾವುದನ್ನು ಆಯ್ಕೆ
ಮಾಡಿಕೊಳ್ಳುವಿರಿ ಎಂದು
ಕೇಳಿದರೆ ಕ್ಯಾನ್ಸರ್ರೇ ಇರಲಿ
ಯಾಕೆಂದರೆ ಬೇರೆ
ಪರ್ಯಾಯ
ಆಯ್ಕೆಗಳಿಲ್ಲವಲ್ಲಾ?
ಕ್ಯಾನ್ಸರ್ ಬಂದರೆ
ಸಂಬಂಧಿಸಿದ ದೇಹದ ಸೀಮಿತ ಭಾಗವನ್ನು ತೆಗೆದು
ಹಾಕಿ
ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ
ಏಡ್ಸ್
ಬಂದರೆ
ದಿನದಿಂದ ದಿನಕ್ಕೆ ಪ್ರತಿರೊಧದ ಶಕ್ತಿಯೇ ಕಡಿಮೆಯಾಗುತ್ತಾ ಹೋಗಿ
ಇತರೆಲ್ಲಾ ರೋಗಗಳೂ
ಅಟಕಾಯಿಸಿಕೊಂಡು ದೇಹ
ರೋಗಗಳ
ತವರಾಗಿ
ಅವಸಾನ
ಹೊಂದುತ್ತದೆ ಇಲ್ಲಿ ದೇಹ
ಎಂಬುದನ್ನು ದೇಶ
ಎಂದುಕೊಂಡರೆ ಸಾಕು..ಉಳಿದದ್ದೆಲ್ಲಾ ತಾನೇ ತಾನಾಗಿ ಅರ್ಥವಾಗುತ್ತದೆ.
ಹಾಗೆಯೇ
ಈಗ
ಮತೀಯವಾದಿಗಳನ್ನು ವಿರೋಧಿಸುವವರಿಗೆ ಕಾಂಗ್ರೆಸ್ ಅನಿವಾರ್ಯದ ಆಯ್ಕೆಯಾಗಿದೆ. ಬೇರೆ
ಪರ್ಯಾಯಗಳಿದ್ದರೂ ಅವುಗಳಿಗೆ ಸಂಘಿಗಳ
ಅಶ್ವವನ್ನು ಕಟ್ಟಿ
ಹಾಕುವ
ಜನಬಲ
ಹಾಗೂ
ಹಣಬಲವಿಲ್ಲವಾಗಿದೆ.. ಹೀಗಾಗಿ
ಕಾಂಗ್ರೆಸ್ಸನ್ನು ಬೆಂಬಲಿಸುವವರು ಕಾಂಗ್ರೆಸ್ಸಿಗರೇ ಆಗಬೇಕೆಂದೇನಿಲ್ಲ. ಮತಾಂಧ
ಸಂಘ
ಪರಿವಾರವನ್ನು ವಿರೋಧಿಸುವವರು ಕಾಂಗ್ರೆಸ್ ಸೇರಬೇಕೆಂದೂ ಇಲ್ಲಾ..
ಅಗೋಚರ
ರಕ್ತಬೀಜಾಸುರ ರಕ್ಕಸನನ್ನು ಮಟ್ಟಹಾಕಲು ಪರಿಚಿತ
ದೆವ್ವವನ್ನು ಬೆಂಬಲಿಸುವುದು ಪ್ರಸ್ತುತ ತಂತ್ರಗಾರಿಕೆಯಾಗಿದೆ. ಯಾಕೆಂದರೆ ಈ
ಅನುಭವೀ
ದೆವ್ವಕ್ಕೆ ಮಾತ್ರ
ರಕ್ಕಸನ
ರಹಸ್ಯಗಳು ಗೊತ್ತಿವೆ ಎಂಬುದು
ಹಲವಾರು
ಪ್ರಗತಿಪರರ ನಂಬಿಕೆಯಾಗಿದೆ. ಇವರ
ನಂಬಿಕೆ
ದಿಟವಾಗಲಿ... ಕೋಮುರಕ್ಕಸ ಹತನಾಗಲಿ... ಸಂವಿಧಾನವನ್ನು ಗೌರವಿಸುವ, ಜನರನ್ನು ಬೇಧಭಾವ
ತೋರದೇ
ಸಂರಕ್ಷಿಸುವ ಸರಕಾರ
ಆಡಳಿತ ಮಾಡಲಿ ಎಂಬುದೇ ಬಹುಜನರ ಆಶಯವಾಗಿದೆ.
-±À²PÁAvÀ AiÀÄqÀºÀ½î
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ