ಬೆಟ್ಟ ಅಗೆದು ಇಲಿ ಹಿಡಿಯೋದಂದ್ರೆ ಇದೇನಾ? :
ಹೌದು! ಬೆಟ್ಟ ಅಗೆದು ಇಲಿ ಹಿಡಿಯೋದಂದ್ರೆ ಇದೇನಾ? ಇಂತಾದ್ದೊಂದು ಪ್ರಶ್ನೆ ಕೆಲವರಾದರೂ
ಪ್ರಜ್ಞಾವಂತರನ್ನು ಕಾಡುತ್ತಲೇ ಇದೆ. ಯಾವಾಗ ಇದ್ದಕ್ಕಿದ್ದಂತೆ ಐನೂರು ಸಾವಿರ ರೂಪಾಯಿಯ ನೋಟುಗಳನ್ನು
ಮೋದಿ ಸರಕಾರ ರದ್ದು ಮಾಡಿತೋ ಆಗಿನಿಂದಲೂ ಮೋದಿಭಕ್ತರ
ಸಂಭ್ರಮದ ನಡುವೆಯೂ ಸಂದೇಹಗಳು ಕಾಡಿದ್ದಂತೂ ಸುಳ್ಳಲ್ಲ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಹೀಗೇ
ಮೋದಿ ಮೇನಿಯಾ ಶುರುವಾಗಿತ್ತು. ವಿದೇಶದಲ್ಲಿರುವ ಕಪ್ಪು
ಹಣವನ್ನು ವಾಪಸ್ ತರುವುದಷ್ಟೇ ಅಲ್ಲಾ.. ಪ್ರತಿ ಭಾರತೀಯರ
ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿಗಳ ಇಡಿಗಂಟನ್ನು ಹಾಕಲಾಗುವುದು ಎಂದು ಮೋದಿಯವರು ಭಾರತೀಯರಿಗೆ
ಭರವಸೆ ಕೊಟ್ಟು ಓಟು ಪಡೆದಿದ್ದರು. ಆದರೆ.. ಸರಕಾರ ಬಂದು ಎರಡೂವರೇ ವರ್ಷ ಕಳೆದರೂ ಬ್ಲಾಕ್ಮನಿ ವಿದೇಶದಿಂದ
ವಾಪಸ್ ತರಲಾಗಲೇ ಇಲ್ಲಾ.. ಯಾವೊಬ್ಬ ಪ್ರಜೆಯ ಖಾತೆಗೂ
ಒಂದುರೂಪಾಯಿ ಸಂದಾಯವಾಗಲಿಲ್ಲ. ಯಾವೊಬ್ಬ ಕಪ್ಪುಹಣದ ತೆರಿಗೆ ಕಳ್ಳನಿಗೂ ಶಿಕ್ಷೆಯಾಗಲೇ ಇಲ್ಲ. ಅಷ್ಟೇ
ಯಾಕೆ ಕಳ್ಳಹಣಕ್ಕೆ ತೆರಿಗೆ ಕಟ್ಟಿದ ಕಳ್ಳರ ಹೆಸರನ್ನೂ ಸಹ ಸರಕಾರ ಗುಟ್ಟಾಗಿಟ್ಟು ರಕ್ಷಿಸಿತು.
ಚಿಕ್ಕಪುಟ್ಟ ರಿಕವರಿಗಳಾದರೂ ಅವು ಹೇಳಿಕೊಳ್ಳುವಂತಹ ಸಾಧನೆಯಾಗಿರಲಿಲ್ಲ.
ಈಗ ಕೊಟ್ಟ ಭರವಸೆಯನ್ನು ಉಳಿಸಿ ಕೊಳ್ಳದೇ ಹೋದರೆ ಉತ್ತರ ಭಾರತದಲ್ಲಿ ನಡೆಯುತ್ತಿರುವ
ಚುನಾವಣೆಯಲ್ಲಿ ಜನ ತಿರುಗಿಬೀಳಬಹುದೆಂಬ ಭಯ ಮೋದಿ ಸರಕಾರವನ್ನು ಇನ್ನಿಲ್ಲದಂತೆ ಕಾಡತೊಡಗಿತು. ಅದ್ಯಾಕೋ
ಸರ್ಜಿಕಲ್ ಸ್ಟ್ರೈಕ್ ಹೆಸರಲ್ಲಿ ಹುಟ್ಟುಹಾಕಿದ ದೇಶಭಕ್ತಿಯ ಮೇನಿಯಾ ಬಹಳ ದಿನ ಕೆಲಸ ಮಾಡಲಿಲ್ಲ. ಏಕ
ರೂಪದ ನಾಗರೀಕತೆಯ ಕಾನೂನೂ ತರಲು ಪ್ರಯತ್ನಿಸಿ ಮುಸ್ಲಿಂ ವಿರೋಧಿ ಅಲೆ ಹುಟ್ಟಿಸುವ ಉಪಾಯಗಳೂ ಫಲಪ್ರದವಾಗಲಿಲ್ಲ. ದಲಿತರ ಹತ್ಯೆ ಹಾಗೂ ಗೋರಕ್ಷಕರ ಹಾವಳಿಗಳಿಂದಾಗಿ
ಮೋದಿ ಸರಕಾರದ ಇಮೇಜ್ ಡ್ಯಾಮೇಜ್ ಆಗತೊಡಗಿತ್ತು. ದೇಶಾದ್ಯಂತ ದಲಿತ ದಮನಿತರು ಸಂಘಪರಿವಾರದ ಸರಕಾರದ
ವಿರುದ್ಧ ತಿರುಗಿಬಿದ್ದಿದ್ದರು. ಜನರೂ ಸಹ ಮೋದಿ ಬಗ್ಗೆ ಬ್ರಮನಿರಸರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ
ಸರಕಾರದ ವೈಪಲ್ಯಗಳನ್ನು ಮರೆಮಾಚಲು, ಈಡೇರಿಸಲಾಗದ ಕೊಟ್ಟ ಭರವಸೆಗಳಿಂದ ಜನರ ಗಮನ ಬೇರೆಡ ಸೆಳೆಯಲು
ಇನ್ನೊಂದು ಪ್ರಚಂಡ ಅಲೆಯೊಂದನ್ನು ಸೃಷ್ಟಿಸುವ ಅನಿವಾರ್ಯತೆ ಪ್ರಧಾನಿಯವರಿಗೆ ಇತ್ತು. ಕಪ್ಪು ಹಣದ
ಹೆಸರು ಹೇಳಿಕೊಂಡೇ ಆಡಳಿತದ ಗದ್ದುಗೆ ಹಿಡಿದ ಮೋದಿಯವರಿಗೆ ಈಗ ಅದೇ ಕಪ್ಪುಹಣದ ಹೆಸರೇ ತಮ್ಮ ಅಸ್ತಿತ್ವ
ಗಟ್ಟಿಗೊಳಿಸಲು ಸಾಧ್ಯವೆಂಬುದು ಅರಿವಾಗಿತ್ತು. ವಿದೇಶದಿಂದ ಬ್ಲಾಕ್ಮನಿ ತರದಿದ್ದರೇನಾಯ್ತು..? ಸ್ವದೇಶದಲ್ಲಿರುವ
ಬ್ಲಾಕ್ಮನಿ ಹೊರತೆಗೆದು ಜನರಿಗೆ ಕಣ್ಕಟ್ಟು ಮಾಡಿದರಾಯಿತು ಎಂದುಕೊಂಡು ಬಹುದೊಡ್ಡ ಆರ್ಥಿಕ ತಂತ್ರಗಾರಿಕೆಯ
ಮಾಸ್ಟರ್ ಸ್ಟ್ರೋಕ್ ಹೆಣೆಯಲಾಯಿತು. ಅದಕ್ಕೆ ಮೋದಿಯವರ ಗುಜರಾತಿ ಗೆಳೆಯ ರಿಜರ್ವ ಬ್ಯಾಂಕಿನ ಹಾಲಿ
ಗವರ್ನರ್ ಊರ್ಜಿತ್ ಪಟೇಲ್ ಸಾತ್ ಕೊಟ್ಟರು. 2016, ನವೆಂಬರ್ 8ರಂದು 5೦೦ ಹಾಗೂ 1೦೦೦ ರೂಪಾಯಿಗಳ ನೋಟುಗಳನ್ನು
ಹಿಂಪಡೆದು ಹೊಸ ನೋಟು ಚಲಾವಣೆ ಮಾಡುವ ಘೋಷಣೆಯನ್ನು ಮೋದಿ ಸಾಹೇಬರು ಮಾಡಿದರು. 2೦೦೦ ಮುಖಬೆಲೆಯ ನೋಟುಗಳು
ಚಲಾವಣೆಗೆ ತರುವುದನ್ನು ಒತ್ತಿ ಹೇಳಿದರು.
ಈ ಸಂಗತಿ ತಿಳಿದದ್ದೇ ಮೋದಿ ಭಕ್ತರು ಹರ್ಷೋದ್ಗಾರ ಮಾಡಿ ಕುಣಿದು ಕುಪ್ಪಳಿಸಿದರು.
ಇನ್ನೇನು ಈ ದೇಶ ಸುಭಿಕ್ಷೆಯ ನಾಡಾಗಿಬಿಡುತ್ತದೆ. ಕಳ್ಳದಂದೆಗಳೆಲ್ಲಾ ನಿಂತು ಹೋಗುತ್ತವೆ. ೫೬ ಇಂಚಿನೆದೆಯ
ಮೋದಿಯೊಬ್ಬರೇ ಯಾರೂ ಮಾಡದ ಸಾಧನೆ ಮಾಡಿದ್ದಾರೆ.. ಜೈ.. ಮೋದಿ.. ಎಂದು ಪ್ರಧಾನಿಯನ್ನು ಹಾಡಿ ಹೊಗಳಿ
ಕುಣಿದಾಡತೊಡಗಿದರು. ಮೋದಿ ಅಭಿಮಾನಿಗಳಲ್ಲದವರೂ,. ಸಂಘ ಪರಿವಾರದ ಸಂಪರ್ಕ ಇಲ್ಲದವರೂ ಸಹ ಮೋದಿಯ ಮೋಡಿಗೆ
ಮರುಳಾಗಿ ಅದ್ಭುತ ಕ್ರಮವೆಂದು ಶ್ಲಾಘಿಸತೊಡಗಿದರು. ಮೋದಿಯವರ ತಂತ್ರಗಾರಿಕೆ ಈ ಸಧ್ಯಕ್ಕಂತೂ ಫಲ ನೀಡಿ
ದೇಶಾದ್ಯಂತ ಸಂಚಲನವನ್ನು ಹುಟ್ಟುಹಾಕಿದ್ದಂತೂ ಸತ್ಯ. ಆದರೆ.. ಈ ಅಕಾಲಿಕ ಆರ್ಥಿಕ ಕ್ರಾಂತಿ ಅದೆಷ್ಟರ
ಮಟ್ಟಿಗೆ ಯಶಸ್ವಿಯಾಗುತ್ತದೆ ಹಾಗೂ ಜನಸಾಮಾನ್ಯರ ಮೇಲೆ ಅದು ಹೇಗೆ ದುಷ್ಪರಿಣಾಮವನ್ನು ಬೀರುತ್ತದೆ..
ಎಂಬುದನ್ನು ಕೆಲವಾರು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.
ಮೊದಲನೆಯದಾಗಿ ದೊಡ್ಡ ದೊಡ್ಡ ಕುಳಗಳು ತಮ್ಮ ಅಕ್ರಮ ಸಂಪಾದನೆಯ ಕಪ್ಪುಹಣ ಎನ್ನುವುದನ್ನು
ಬಹುದೊಡ್ಡ ಮಟ್ಟದಲ್ಲಿ ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿದ್ದರಿಂದ ಅವರ ಎಲ್ಲಾ ಹಣ ಸೇಫಾಗಿಯೇ ಇದೆ.
ಅದನ್ನು ಭಾರತಕ್ಕೆ ಮರಳಿ ತರುವುದು ಅಂದುಕೊಂಡಷ್ಟು ಸುಲಭಸಾಧ್ಯವಾದುದಲ್ಲ. ಸ್ವಿಸ್ ಬ್ಯಾಂಕಲ್ಲಿ ಬ್ಲಾಕ್ಮನಿ
ಇಟ್ಟವರ ಮೊದಲ ಕಂತಿನ ಹೆಸರುಗಳನ್ನು ವೀಕಿಲೀಕ್ಸ್ ಈಗಾಗಲೇ ಬಯಲುಗೊಳಿಸಿದೆ. ಅದರಲ್ಲಿ ಎಲ್.ಕೆ.ಅಡ್ವಾನಿ (5600ಕೋಟಿ), ಎ.ರಾಜಾ (7800ಕೋಟಿ),
ಕರುಣಾನಿಧಿ (15800ಕೋಟಿ), ಜಯಲಲಿತಾ (150000ಕೋಟಿ),
ಕುಮಾರಸ್ವಾಮಿ (1450ಕೋಟಿ), ಹೀಗೆ 24 ಕುಬೇರರು ತಮ್ಮ ಕಪ್ಪುಹಣವನ್ನು ಸ್ವಿಸ್ ಬ್ಯಾಂಕಲ್ಲಿ ಇಟ್ಟಿದ್ದಾರೆಂಬುದನ್ನು
ಬಯಲಾಗಿದೆ. ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕಿನಲ್ಲಿ 2೦೦೦ ಭಾರತೀಯ ಕಾಳಧನಿಕರು ತೆರಿಗೆ ತಪ್ಪಿಸಿ
ಇಟ್ಟ ಒಟ್ಟು ಕಳ್ಳ ಹಣ 1.3 ಮಿಲಿಯನ್ ಡಾಲರ್ಸ್ ಅಂದರೆ ಇಷ್ಟು ಹಣ ಇದ್ದರೆ ಭಾರತ ಜಗತ್ತಿನ ಸಮೃದ್ದ
ದೇಶವಾಗುವುದರಲ್ಲಿ ಸಂದೇಹವಿಲ್ಲ. ಆದರೆ.. ಈ ಹಣವನ್ನು ತಂದು ಕಪ್ಪುಹಣದ ಧನಿಗಳನ್ನು ಶಿಕ್ಷೆಗೆ ಗುರಿಪಡಿಸುವುದಂತೂ
ಮೋದಿ ಸರಕಾರಕ್ಕೆ ಅಸಾಧ್ಯವಾದ ಮಾತು. ಅವರು ಅಂತಹ ಕ್ರಮ ಕೈಗೊಂಡರೆ ಅವರದೇ ಪಕ್ಷದ ಮುಖಂಡರು ಹಾಗೂ
ಪೋಷಕರು ಮೊದಲು ಬಟಾಬಯಲಾಗುತ್ತಾರೆ. ಹೀಗಾಗಿ.. ವಿದೇಶಿ ಬ್ಲಾಕ್ಮನಿಯ ವಿಚಾರವನ್ನು ಅಲ್ಲಲ್ಲಿಗೇ ಕೈಬಿಟ್ಟು
ಈಗ ಸ್ವದೇಶಿ ಬ್ಲಾಕ್ಮನಿಗೆ ಮೋದಿ ಶಿಪ್ಟ್ ಆಗಿದ್ದಾರೆ.
ಹೋಗಲಿ ದೇಶದಲ್ಲಿರುವ ಕಪ್ಪುಹಣವೆಲ್ಲಾ ನಿರ್ಣಾಮವಾದರೂ ದೇಶ ಅಭಿವೃದ್ದಿಯಾಗಬಹುದೆಂದು
ಸಮಾಧಾನಪಟ್ಟುಕೊಳ್ಳಬಹುದಾಗಿದೆ. ಆದರೆ.. ಅದೆಷ್ಟು ಜನ ತೆರಿಗೆಕಳ್ಳರು ಹಾರ್ಡಕ್ಯಾಶನ್ನು ಮನೆಯಲ್ಲಿ
ಬಚ್ಚಿಟ್ಟುಕೊಂಡಿರುತ್ತಾರೆ. ಕಳ್ಳರ ಮನಸ್ಸು ಯಾವಾಗಲೂ ಆತಂಕದಲ್ಲಿರುವುದರಿಂದ ಹಾಗೂ ಇನ್ಕಮ್ ಟ್ಯಾಕ್ಸ್
ರೇಡ್ ಯಾವಾಗ ಬೇಕಾದರೂ ಆಗಬಹುದಾದ ಭಯವೂ ಇರುವುದರಿಂದ ಕೊಟ್ಯಾಂತರ ಹಣವನ್ನು ಕ್ಯಾಶ್ ರೂಪದಲ್ಲಿ ಇಟ್ಟುಕೊಂಡು
ಅಪಾಯವನ್ನು ಎದುರಿಸಲು ಯಾವುದೇ ದೊಡ್ಡ ತೆರಿಗೆಗಳ್ಳರಿಗೆ ಸಾಧ್ಯವಿಲ್ಲ. ಅದರರ್ಥ ಅವರಲ್ಲಿ ಕಪ್ಪುಹಣ
ಇಲ್ಲವೆಂದಲ್ಲ. ಆದರೆ.. ಆದು ಹಣದ ರೂಪದಲ್ಲಿರದೇ ಬಂಗಾರ, ಬೇನಾಮಿ ಶೇರು ಇಲ್ಲವೇ ಭೂಮಿ ರೂಪದಲ್ಲಿರುತ್ತದೆ.
ಅದೆಷ್ಟೋ ಆಸ್ತಿಗಳು ಬೇನಾಮಿ ಹೆಸರಲ್ಲಿರುತ್ತವೆ. ಮೋದಿಯವರ ಈ ಆರ್ಥಿಕ ಸರ್ಜಿಕಲ್ ಸ್ಟೋಕ್ ಕಪ್ಪುಹಣದ
ಮೇಲಿದೆಯೇ ಹೊರತು ಅಕ್ರಮ ಭೂಮಿ ಹಾಗೂ ಬಂಗಾರದ ಸಂಪತ್ತಿನ ಮೇಲಿಲ್ಲವಲ್ಲ. ಅಕಸ್ಮಾತ್ ದೊಡ್ಡ ದೊಡ್ಡ
ತಿಮಿಂಗಿಲುಗಳ ಬಳಿ ಹಣದ ರೂಪದಲ್ಲಿ ಬ್ಲಾಕ್ಮನಿ ಇದ್ದರೂ
ಅದು ಇಂಡಿಯನ್ ಕರೆನ್ಸಿ ಆಗುವುದರ ಬದಲಾಗಿ ಡಾಲರ್ ರೂಪದಲ್ಲಿರುತ್ತದೆ.
ಹೀಗಾಗಿ ಸ್ವದೇಶಿ ಕಪ್ಪುಹಣದ ಧನಿಗಳೂ ಸಹ ಆದಷ್ಟೂ ಸೇಫಾಗಿದ್ದಾರೆ. ಅಕಸ್ಮಾತ್ ನಾಲ್ಕೈದು
ಕೋಟಿ ಇಂಡಿಯನ್ ಹಣ ಕ್ಯಾಶ್ ರೂಪದಲ್ಲಿದ್ದವರೂ ಅವರಿಗಿರುವ ಪ್ರಭಾವದಿಂದ ಅದನ್ನು ಬಿಳಿಯಾಗಿ ಪರಿವರ್ತಿಸುವ
ಕಲೆ ಅವರಿಗೆ ಗೊತ್ತಿದೆ. ಆರ್ಥಿಕ ವ್ಯವಹಾರದಲ್ಲಿ ಪಳಗಿರದೆ ಕಪ್ಪು ಹಣವನ್ನು ಕ್ಯಾಶ್ ರೂಪದಲ್ಲಿ ಇಟ್ಟುಕೊಂಡ ಶೇಕಡಾ
ಎರಡು ಪರ್ಸಂಟೇಜ್ ಜನರು ಮಾತ್ರ ಸಂಕಷ್ಟಕ್ಕೊಳಗಾಗಬಹುದಾಗಿದೆ. ಅವರ ಕಪ್ಪು ಹಣವನ್ನೂ ಸಹ ಬಿಳಿ ಮಾಡುವ
ಕೆಲಸವನ್ನು ಉಳಿದ 50 ದಿನಗಳಲ್ಲಿ ಮಾಡಿ ಮುಗಿಸುತ್ತಾರೆ. ಅಷ್ಟಕ್ಕೂ ಬಿಳಿಮಾಡಲಾಗದೇ ಪರಿತಪಿಸುವವರ
ಒಂದಿಷ್ಟು ಕೋಟಿಗಳು ದೇವಸ್ಥಾನದ ಹುಂಡಿಗೆ ಅರ್ಪಿತವಾಗಬಹುದು ಇಲ್ಲವೇ ಬೆಂಕಿಗೆ ಆಹುತಿಯಾಗಬಹುದು..
ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಅಂತಹುದರ ಪರ್ಸಂಟೇಸ್ ತುಂಬಾನೇ ಕಡಿಮೆಯಾಗಿರುತ್ತದೆ. ನೂರಾರು
ಕೋಟಿ ರೂಪಾಯಿ ಕಪ್ಪುಹಣ ಇಟ್ಟುಕೊಂಡು ಕೂಡುವವನು ವ್ಯವಹಾರಸ್ತನಲ್ಲವೇ ಅಲ್ಲ. ಅದನ್ನು ಯಾವುದೋ ರೂಪದಲ್ಲಿ
ತೊಡಗಿಸಿ ಮತ್ತೆ ಲಾಭಗಳಿಸಲು ಪ್ರಯತ್ನಿಸುವುದೇ ಬಂಡವಾಳಶಾಹಿಯ ಲಕ್ಷಣವಾಗಿದೆ.
ಕಾಪೋರೇಟ್ ಕಂಪನಿಗಳು ಹಾಗೂ ಬಂಡವಾಳಗಾರರ ಸಹಕಾರದಿಂದಲೇ ಮೋದಿ ಸರಕಾರ ಅಸ್ತಿತ್ವಕ್ಕೆ
ಬಂದಿದೆ. ಕಪ್ಪು ಹಣದ ಸಹಕಾರವಿಲ್ಲದೇ ಯಾವುದೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲವೆಂಬುದು ಎಲ್ಲರಿಗೂ
ಗೊತ್ತಿರುವ ಸಂಗತಿಯೇ ಆಗಿದೆ. ಇಂತಹುದರಲ್ಲಿ ಮೋದಿ ತಮ್ಮ ಪೋಷಕರ ವಿರುದ್ದ ಸಮರ ಸಾರಲು ಸಾಧ್ಯವೇ..?
ಖಂಡಿತಾ ಸಾಧ್ಯವಿಲ್ಲ. ಈಗಿನ ನೋಟು ನಿಷೇದದಿಂದಾಗಿ ಅಂಬಾನಿ ಆದಾನಿಯಂತಹ ದೇಶಿ ಬಂಡವಾಳಿಗರಿಗೆ ಎಂತದೂ
ಅಪಾಯವಿಲ್ಲ. ಇನ್ನು ಈ ಆರ್ಥಿಕ ಸುಧಾರಣೆಯನ್ನು ಸ್ವಾಗತಿಸಿದ ಇನ್ಪೋಸಿಸ್ಸಿನ ನಾರಾಯಣಮೂರ್ತಿಯಂತಹ
ಭಾರತೀಯ ಕಾರ್ಪೋರೇಟ್ ಕಂಪನಿಗಳಿಗೂ ಬ್ಲಾಕ್ಮನಿ ಸ್ಟ್ರೋಕ್
ಬಾದಿಸದು. ಯಾಕೆಂದರೆ ಇವರ ವ್ಯವಹಾರವೆಲ್ಲಾ ಇರುವುದೇ ಡಾಲರ್ ಲೆಕ್ಕದಲ್ಲಿ ಹಾಗೂ ಹೆಚ್ಚು ಹಣ ಇರುವುದೂ
ವಿದೇಶಿ ಬ್ಯಾಂಕುಗಳಲ್ಲಿ. ನಮ್ಮ ದೇಶದ ಅರ್ಧದಷ್ಟು ಸಂಪತ್ತು ಇರುವುದೇ ಶೇಕಡಾ ಒಂದರಷ್ಟು ಕುಬೇರರ
ಕಬ್ಜಾದಲ್ಲಿ.
ಹೀಗಾಗಿ ವಿದೇಶದಲ್ಲಿ ಬ್ಲಾಕ್ಮನಿ ಇಟ್ಟವರೂ ಹಾಗೂ ಸ್ವದೇಶದಲ್ಲಿ ಬ್ಲಾಕ್ಮನಿಯನ್ನು
ಹಣಕಾಸೇತರ ಮಾರ್ಗದಲ್ಲಿ ತೊಡಗಿಸಿಕೊಂಡವರೂ ಸೇಫಾಗಿದ್ದಾರೆ. ಕಪ್ಪನ್ನು ಬಿಳಿಮಾಡಲಾಗದ ಕೆಲವೇ ಕೆಲವು
ಶ್ರೀಮಂತರು ತೆರಿಗೆ ಕಟ್ಟಬಹುದೇ ಹೊರತು ಅವರ ಶ್ರೀಮಂತಿಗೆಗಂತೂ ಯಾವುದೇ ಅಪಾಯವಿಲ್ಲ. ಆದರೆ.. ನಿಜಕ್ಕೂ
ಮೋದಿಜಿಯವರ ಸರ್ಜಿಕಲ್ ಸ್ಟ್ರೋಕ್ ಎಫೆಕ್ಟ್ ಆಗುವುದು ಜನಸಾಮಾನ್ಯರು ಅದರಲ್ಲೂ ಮಧ್ಯಮವರ್ಗ ಮತ್ತು
ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡಿ ಬದುಕುವವರ ಮೇಲೆ. ಈ ಕಪ್ಪು ಹಾಗೂ ಬಿಳಿ ಹಣದ ಬಗ್ಗೆ ಅರಿವೇ ಇಲ್ಲದ
ಬಹುಸಂಖ್ಯಾತ ವರ್ಗವೊಂದಿದೆ. ರೈತಾಪಿ ಕೂಲಿ ಕಾರ್ಮಿಕರೂ ಸಹ ತಮ್ಮಲ್ಲಿ ಸಾವಿರಗಳ ನೋಟುಗಳನ್ನು ಭವಿಷ್ಯದ
ತಾಪತ್ರಯಗಳಿಗೆ ಇರಲೆಂದು ಉಳಿಸಿಕೊಂಡಿರುತ್ತಾರೆ. ಅದರಲ್ಲಿ ಅದೆಷ್ಟೋ ಜನರ ಬಳಿ ಬ್ಯಾಂಕ್ ಅಕೌಂಟು,
ಪ್ಯಾನ್ ಕಾರ್ಡುಗಳಿರುವುದಿಲ್ಲ. ಅದೆಷ್ಟೋ ದುಡಿಯುವ ವರ್ಗಗಳಿಗೆ ಬ್ಯಾಂಕ್ ವ್ಯವಹಾರಗಳೇ ಗೊತ್ತಿರುವುದಿಲ್ಲ.
ಇನ್ನೂ ಅನಕ್ಷರಸ್ತರು ಈ ದೇಶದಲ್ಲಿದ್ದಾರೆ. ಇನ್ನು ಕೆಲವರು ಕಷ್ಟಕ್ಕಿರಲಿ ಎಂದು ದುಡಿದ ಹಣವನ್ನು
ಕೂಡಿಟ್ಟಿರುತ್ತಾರೆ. ಅದನ್ನು ತೆಗೆದುಕೊಂಡು ಹೋಗಿ ಬ್ಯಾಂಕಲ್ಲಿ ಬದಲಾಯಿಸಲೂ ಸಂಕೋಚ ಹಾಗೂ ಅಜ್ಞಾನ.
ಇನ್ನು ಮಹಿಳೆಯರು ಮುಂಬರುವ ಗೃಹಸಂಕಟಗಳಿಗೆ ಉಪಯೋಗಕ್ಕೆ ಇರಲಿ ಎಂದು ಹೊಟ್ಟೆ ಬಟ್ಟೆ ಕಟ್ಟಿ ಯಾವುಯಾವುದೋ
ಗುಪ್ತ ಜಾಗಗಳಲ್ಲಿ ಐನೂರು ಸಾವಿರ ರೂಪಾಯಿಗಳನ್ನು ಮನೆಯಜಮಾನನಿಗೆ ಗೊತ್ತಾಗದ ಹಾಗೆ ಗುಟ್ಟಾಗಿ ಇಟ್ಟಿರುತ್ತಾರೆ.
ಮಗನ ವಿದ್ಯಾಬ್ಯಾಸಕ್ಕೋ, ಮಗಳ ಮದುವೆಗೂ ಕೂಡಿಟ್ಟ ಹಣ ಕೂಡಿಟ್ಟಲ್ಲೆ ಮೌಲ್ಯರಹಿತವಾಗುತ್ತದೆ. ಈಗ ಗುಟ್ಟಾಗಿ
ಉಳಿಸಿಟ್ಟ ಹಣವನ್ನು ಬಹಿರಂಗವಾಗಿ ತೆಗೆದುಕೊಂಡು ಹೋಗಿ
ಪಟ್ಟಣದ ಬ್ಯಾಂಕುಗಳಲ್ಲಿ ಬದಲಾಯಿಸಲೂ ಬಹುತೇಕ ಗ್ರಾಮೀಣರಿಗೆ ಸಾಧ್ಯವಾಗುತ್ತಿಲ್ಲ. ಎಲ್ಲಿ
ತಮ್ಮ ಗುಟ್ಟು ರಟ್ಟಾಗುತ್ತದೋ ಎನ್ನುವ ಆತಂಕದಲ್ಲಿ ಸರಕಾರವನ್ನು ಬೈದುಕೊಂಡು ಸುಮ್ಮನಾಗುತ್ತಾರೆ.
ಇಂತವರ ಸಂಖ್ಯೆ ಕೋಟಿಗಳಲ್ಲಿ ಇದೆ. ನೂರು ಕೋಟಿ ಜನರು ಸಾವಿರ ರೂಪಾಯಿಯ ಒಂದೇ ನೋಟನ್ನು ಇಟ್ಟುಕೊಂಡಿದ್ದರೂ
ಅದರ ಒಟ್ಟು ಮೊತ್ತ ಒಂದು ಲಕ್ಷ ಕೋಟಿಯಾಗುತ್ತದೆ. ಅಂದರೆ.. ಇದರಲ್ಲಿ ಬ್ಯಾಂಕಲ್ಲಿ ವಿನಿಮಯ ಆಗದ ಬಡಜನರ
ದುಡ್ಡೆಲ್ಲವೂ ಸಹ ಕಪ್ಪುಹಣದ ಲೆಕ್ಕಕ್ಕೆ ದಕ್ಕುತ್ತದೆ. ಅದೆಷ್ಟೋ ಜನರ ಬೆವರಿನ ಪ್ರತಿಫಲ ಸರ್ವನಾಶವಾಗುತ್ತದೆ.
ಅಕೌಂಟೇ ಇಲ್ಲದ ಬಡಜನರು ತಮ್ಮಲ್ಲಿರುವ ಐನೂರು ಸಾವಿರ ರೂಪಾಯಿಯ ನೋಟನ್ನು ಬದಲಾಯಿಸಿಕೊಳ್ಳಲೂ ಸಾಧ್ಯವಾಗದೇ
ಅಸಹಾಯಕರಾಗಿದ್ದಾರೆ. ಅದರರ್ಥ ಈ ದಿಡೀರ್ ಆರ್ಥಿಕ ಕ್ರಾಂತಿಯಿಂದಾಗಿ ಶ್ರೀಮಂತರಿಗಿಂತಾ ಬಡಜನರ ಬದುಕು
ಇನ್ನಷ್ಟು ಬಿಗಡಾಯಿಸುತ್ತದೆ.
ತೆರಿಗೆ ಕಟ್ಟಲಾಗದ್ದೆಲ್ಲವೂ ಕಪ್ಪು ಹಣ ಎನ್ನುವುದು ಸರಕಾರದ ಲೆಕ್ಕಾಚಾರ. ಆದರೆ..
ಅದೆಷ್ಟೋ ರೈತ ಕೂಲಿ ಜನರು ತಮ್ಮ ಶ್ರಮದ ಫಲವಾಗಿ ಸಾವಿರಾರು ರೂಪಾಯಿಗಳನ್ನು ತಮ್ಮಲ್ಲಿ ಇಟ್ಟುಕೊಂಡಿರುತ್ತಾರೆ.
ಸರಕಾರಿ ಲೆಕ್ಕದಲ್ಲಿ ಅದೆಲ್ಲಾ ಕಳ್ಳಹಣ ಎಂದಾಗುತ್ತದೆ. ಅಂದರೆ ಬೆವರಿನ ಫಲದಿಂದ ಪಡೆದ ಹಣ ಕಿಸೆಯಲ್ಲಿದ್ದರೂ
ಅದು ಕಪ್ಪು ಹಣ. ಅದನ್ನು ಬ್ಯಾಂಕಲ್ಲಿ ಅಕೌಂಟಿಲ್ಲದೇ ನೇರವಾಗಿ ಬದಲಾಯಿಸಲಾಗದು. ಶ್ರೀಮಂತರ ಬಳಿ ಇರುವ
ಕಪ್ಪು ಹಣಕ್ಕೂ ಹಾಗೂ ಬಡವರ ಬಳಿ ಇರುವ ಲೆಕ್ಕಕೊಡಲಾಗದ ದುಡಿಮೆಯ ಹಣಕ್ಕೂ ವ್ಯತ್ಯಾಸವಿದೆ. ಆದರೆ..
ಸರಕಾರ ಇದನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನಿಮ್ಮಲ್ಲಿ ಸಾವಿರದ ಒಂದೇ ಒಂದು ನೋಟಿದ್ದರೂ
ಅದು ಬ್ಯಾಂಕ್ ಮೂಲಕವೇ ಬದಲಾವಣೆಗೊಳ್ಳಬೇಕು ಹಾಗೂ ಅದಕ್ಕೆ ಅಧೀಕೃತವಾಗಿ ಗುರುತಿನ ಚೀಟಿ ಕೊಡಬೇಕು
ಮತ್ತು ಬ್ಯಾಂಕಲ್ಲಿ ಅಕೌಂಟ್ ಇಲ್ಲದಿದ್ದರೆ ತೆರೆಯಬೇಕು. ಒಂದು ನೋಟು ಬದಲಾಯಿಸಲು ದೂರದ ಪಟ್ಟಣದಲ್ಲಿರುವ
ಬ್ಯಾಂಕಿಗೆ ಹೋಗಿ ಅಕೌಂಟ್ ತೆರೆದು ನೋಟು ಬದಲಾಯಿಸಲು ರೈತಾಪಿ ಕೂಲಿಗಳಿಗೆ, ದಲಿತರಿಗೆ, ಮಹಿಳೆಯರಿಗೆ
ಸಾಧ್ಯವಿದೆಯೇ. ಬದಲಾಯಿಸಲಾರದೇ ಇರುವ ಹಣ ಕಪ್ಪು ಹಣವೆಂದು ಸರಕಾರ ಘೋಷಿಸುತ್ತದೆ. ಕೊನೆಗೆ ಇಷ್ಟೊಂದು
ಕೋಟಿ ಅಗಾಧ ಪ್ರಮಾಣದ ಕಪ್ಪು ಹಣವನ್ನು ಚಲಾವಣೆರಹಿತಗೊಳಿಸಿ ಆರ್ಥಿಕವಾಗಿ ಸ್ವಚ್ಚಭಾರತ ಅಭಿಯಾನವನ್ನು
ಯಶಸ್ವಿಗೊಳಿಸಲಾಯಿತು ಎಂದು ಕೇಂದ್ರ ಸರಕಾರ ಘೋಷಿಸುತ್ತದೆ. ಭಕ್ತರು ಮೋದಿ ಸಾಧನೆಗೆ ಜೈಕಾರ ಹಾಕಿ
ಕುಣಿದಾಡುತ್ತದೆ.
ಇಲ್ಲಿವರೆಗೂ ಅನೇಕಾನೇಕ ಚಿಕ್ಕಪುಟ್ಟ ವ್ಯವಹಾರಗಳು ಯಾವುದೇ ಅಕೌಂಟಿಲ್ಲದೇ ನಡೆದುಕೊಂಡು
ಬರುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಇರುವ ಪೆಟ್ಟಿ ಅಂಗಡಿಗಳ ಆದಾಯ ಅದರ ಮಾಲೀಕರ ಕುಟಂಬ ನಿರ್ವಹಣೆಗೆ
ಸರಿಹೋಗುತ್ತಿತ್ತು. ಈಗ ಎಲ್ಲದಕ್ಕೂ ಲೆಕ್ಕ ಕೊಡುವಂತಹ ಬಿಗಿ ಆರ್ಥಿಕ ನೀತಿ ಜಾರಿಗೆ ಬಂದರೆ ಮೊಟ್ಟ
ಮೊದಲು ಬರ್ಬಾದಾಗೋದು ಚಿಕ್ಕಪುಟ್ಟ ವ್ಯಾಪಾರಸ್ತರು,
ಬೀದಿ ಬದಿಯ ಮಾರಾಟಗಾರರು ಹಾಗೂ ಸಣ್ಣ ಪುಟ್ಟ ಪ್ರಮಾಣದ ಲೇವೀದಾರರು. ಬಡಜನರು ತಮ್ಮ ತುರ್ತಿಗೆ ಹಣಕಾಸಿನ
ಸಹಾಯ ಬೇಕೆಂದರೆ ಮೊದಲು ಹೋಗುವುದೇ ಸ್ಥಳೀಯ ಲೇವಾದೇವಿದಾರರ ಬಳಿಗೆ. ಏನೂ ಇಲ್ಲದವರಿಗೆ ಯಾವ ಬ್ಯಾಂಕೂ
ಅಡಮಾನವಿಡದೇ ಒಂದು ರೂಪಾಯಿ ಸಾಲವನ್ನೂ ಕೊಡುವುದಿಲ್ಲ. ಲೇವಿದಾರರು ಕಪ್ಪು ಬಿಳಿ ಹಣದ ಲೆಕ್ಕಾಚಾರದಲ್ಲಿ
ಸಿಕ್ಕು ಅಗತ್ಯವಿದ್ದವರಿಗೆ ಹಣ ಕೊಡಲು ಸಾಧ್ಯವಿಲ್ಲವೆಂದರೆ ಬಡವರು ಎಲ್ಲಿಗೆ ಹೋಗಬೇಕು?
ದೇಶದ ಹಣವೆಲ್ಲಾ ಬಿಳಿಯಾಗಿ ಕಪ್ಪು ಹಣದ ಚಲಾವಣೆಯೇ ನಿಂತು ಹೋಯಿತೆಂದು ಭಾವಿಸೋಣ..
ಆಗ ಅದರ ಸಂಪೂರ್ಣ ಲಾಭವಾಗುವುದು ಮತ್ತೆ ಬಹುರಾಷ್ಟ್ರೀಯ ಹಾಗೂ ಕಾಪೋರೇಟ್ ಕಂಪನಿಗಳಿಗೆ ಎನ್ನುವುದು
ಸತ್ಯ. ಯಾಕೆಂದರೆ ಕಪ್ಪು ಹಣದ ಚಲಾವಣೆ ನಿಂತರೆ ಬಹುತೇಕ ವ್ಯವಹಾರಗಳು ಅಧಿಕೃತಗೊಳ್ಳುತ್ತವೆ. ಸಣ್ಣ
ಪುಟ್ಟ ವ್ಯಾಪಾರಸ್ತರು ಈ ತೆರಿಗೆ ಲೆಕ್ಕಾಚಾರದ ಜಂಜಾಟದಲ್ಲಿ ಬೀಳದಿರುವುದರಿಂದ ದೊಡ್ಡ ವ್ಯಾಪಾರಸ್ತ
ಮಳಿಗೆಗಳು ತೆರಿಗೆಯನ್ನು ಗ್ರಾಹಕರ ಮೇಲೆ ಹಾಕಿ ಲಾಭ ದೋಚತೊಡಗುತ್ತಾರೆ. ಸರಕಾರಕ್ಕೇನೋ ತೆರಿಗೆ ರೂಪದಲ್ಲಿ
ಜನರ ಹಣ ಬಂಡವಾಳಿಗರ ಮೂಲಕ ಸೇರುತ್ತದೆ. ಆದರೆ.. ಚಿಕ್ಕ ಪುಟ್ಟ ವ್ಯಾಪಾರಸ್ತರು ಬರುಬರುತ್ತಾ ನಾಶವಾಗುತ್ತಾರೆ.
ಇದರಿಂದಾಗಿ ಬಡವರು ಹೆಚ್ಚೆಚ್ಚು ಬಡವರಾಗುತ್ತಾರೆ. ಶ್ರೀಮಂತರು ಇನ್ನೂ ಹೆಚ್ಚೆಚ್ಚು ಶ್ರೀಮಂತರಾಗಿ
ಅಸಮಾನತೆ ಎನ್ನುವುದು ಮಿತಿಮೀರುತ್ತದೆ. ಸಾವಕಾಶವಾಗಿ ಕಾರ್ಪೋರೇಟ್ ದಿಗ್ಗಜ ಕಂಪನಿಗಳು ಇಡೀ ದೇಶದ
ವ್ಯಾಪಾರ ವಹಿವಾಟನ್ನು ತಮ್ಮ ವಶಕ್ಕೆ ತೆಗೆದುಕೊಂಡು ತಮ್ಮಿಷ್ಟದಂತೆ ಇಡೀ ದೇಶದ ಆರ್ಥಿಕತೆಯನ್ನು ನಿರ್ವಹಿಸುವ
ಅಪಾಯವೂ ಬೇಕಾದಷ್ಟಿವೆ. ಯಾಕೆಂದರೆ ಈ ದೇಶದ ಬ್ರಷ್ಟತೆ
ಆ ರೀತಿ ಇದೆ.
ದೊಡ್ಡ ದೊಡ್ಡ ತಿಮಿಂಗಿಲುಗಳನ್ನು ಹಿಡಿಯಲಾರದ ಸರಕಾರವು ಚಿಕ್ಕಪುಟ್ಟ ಮೀನುಗಳಿಗೆ
ಬಲೆಯನ್ನು ಹರಡಿ ಕೂತಿದೆ. ಸಾವಿರಾರು ಕೋಟಿ ಬ್ಲಾಕ್ಮನಿಯೊಂದಿಗೆ ವಿದೇಶಕ್ಕೆ ಪಲಾಯನ ಮಾಡಿದ ವಿಜಯ್
ಮಲ್ಯರಂತರವರನ್ನು, ಸರಕಾರಕ್ಕೆ ಸಾವಿರಾರು ಕೋಟಿ ಪಂಗನಾಮ ಹಾಕಿ ದೇಶಬಿಟ್ಟು ಓಡಿ ಹೋದ ಲಲಿತ್ ಮೋದಿಯಂತಹ
ದೊಡ್ಡ ಪ್ರಾಡಗಳಿಂದ ಒಂದು ರೂಪಾಯಿಯನ್ನು ವಸೂಲಿ ಮಾಡಲಾಗದ ಕೇಂದ್ರ ಸರಕಾರವು ಈಗ ಬಡಜನರ ಕಿಸೆಗೆ ಕೈಹಾಕಿ
ಇರುವ ನಾಲ್ಕಾರು ನೋಟುಗಳಿಗೂ ಬೆಲೆ ಇಲ್ಲದಂತೆ ಮಾಡುತ್ತಿದೆ. ನಿಜವಾಗಿ ಕಪ್ಪು ಹಣ ಇರುವ ಶ್ರೀಮಂತರಿಗೆ
ಬಿಳಿ ಹಣವನ್ನಾಗಿಸುವ ಮಾರ್ಗಗಳು ಗೊತ್ತಿವೆ ಹಾಗೂ ಅಂತವರು ಪ್ರಭಾವಶಾಲಿಗಳೂ ಆಗಿದ್ದಾರೆ. ಆದರೆ..
ಯಾವುದೂ ಗೊತ್ತಿಲ್ಲದೇ ಒಂದಿಷ್ಟು ನೋಟುಗಳನ್ನು ಮನೆಯಲ್ಲಿ
ಇಟ್ಟುಕೊಂಡ ಅಮಾಯಕ ದುಡಿಯುವ ಜನರು ಮಾತ್ರ ಇದ್ದದ್ದನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ.
ಆದರೆ.. ಅವರ ಗೋಳನ್ನು ಕೇಳುವವರು ಯಾರೂ ಇಲ್ಲವಾಗಿದೆ. ಹೀಗಾಗಿ ಬರುಬರುತ್ತಾ ಈ ತುಘಲಕ್ ಸರಕಾರದ ಆರ್ಥಿಕ
ನೀತಿಯ ಮೇಲೆಯೇ ಬಡಜನರಿಗೆ ನಂಬಿಕೆ ಹೋಗುತ್ತದೆ. ಮಧ್ಯಮವರ್ಗದವರೂ ಸಹ ಹಣಕ್ಕಿಂತಲೂ ಬಂಗಾರವೇ ವಾಸಿ
ಎಂದು ಸರಕಾರಿ ಲೆಕ್ಕದ ಕಪ್ಪು ಹಣವನ್ನು ಬೇರೆ ಕಡೆಗೆ ಹೂಡಿಕೆ ಮಾಡಲು ಶುರು ಮಾಡುತ್ತಾರೆ.
ಕಪ್ಪು ಹಣದ ನಿಯಂತ್ರಣಕ್ಕೆ ನೋಟುಗಳ ಬದಲಾವಣೆ ಮಾಡಿದ್ದು ಇದೇ ಮೊದಲನೆಯದೂ ಅಲ್ಲಾ..
ಕೊನೆಯದೂ ಅಲ್ಲಾ. ಸ್ವಾತಂತ್ರ್ಯ ಪೂರ್ವದಲ್ಲಿ 1946 ರಲ್ಲಿ ಸಹ ಆಗ ಚಲಾವಣೆಂiiಲ್ಲಿದ್ದ ಒಂದು ಸಾವಿರ
ಹಾಗೂ ಹತ್ತು ಸಾವಿರ ಮುಖಬೆಲೆಯ ನೋಟುಗಳನ್ನು ಕಪ್ಪು ಹಣ ತಡೆಯುವ ಉದ್ದೇಶದಿಂದ ರದ್ದು ಮಾಡಲಾಗಿತ್ತು. ಮತ್ತೆ 1954 ರಲ್ಲಿ 1೦೦೦, 5೦೦೦ ಹಾಗೂ 1೦೦೦೦ ಮುಖಬೆಲೆಯ
ನೋಟುಗಳನ್ನು ಪರಿಚಯಿಸಲಾಯಿತು. ಆದರೆ ಮತ್ತೆ ಕಪ್ಪು ಹಣ ನಿಯಂತ್ರಣಕ್ಕಾಗಿ ಈ ನೋಟುಗಳನ್ನು 1978 ರಲ್ಲಿ
ಮೊರಾರ್ಜಿ ದೇಸಾಯಿಯವರು ಸಹ ಇದೇ ಮೋದಿಯವರಂತೆ ಇದ್ದಕ್ಕಿದ್ದಂತೆ ಹಿಂಪಡೆದು ಅಚ್ಚರಿ ಹುಟ್ಟಿಸಿದ್ದರು.
ಆದರೆ.. ಆಗ ಈ ದೊಡ್ಡ ಮೊತ್ತದ ನೋಟುಗಳನ್ನು ಕೇವಲ ಶ್ರೀಮಂತರೇ ಹೊಂದಿದ್ದರಿಂದ ಬಡಜನರಿಗೆ ಯಾವುದೇ
ರೀತಿಯ ತೊಂದರೆಯಾಗಿರಲಿಲ್ಲ. ಬ್ಯಾಂಕುಗಳನ್ನು ಆಗಲೂ ಬಂದ್ ಮಾಡಿ ಎಲ್ಲಾ ವ್ಯವಹಾರಗಳೂ ಸಹ ಕಾನೂನು
ಬದ್ದವಾಗಿಯೇ ನಡೆಯಬೇಕು ಎಂದು ಮುರಾರ್ಜಿ ಸರಕಾರ ಉದ್ದೇಶಿಸಿತ್ತು. ಈ ಆರ್ಥಿಕ ಬದಲಾವಣೆ ಜಾರಿಮಾಡಲು
ಮೊರಾರ್ಜಿ ‘ಡಿಮೊನಟೈಸೇಷನ್ ಆಕ್ಟ್’ ಜಾರಿಗೆ ತಂದರು. ಇದಾದ 20 ವರ್ಷಗಳ ನಂತರ
1998 ರಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಸರಕಾರ ಈ ಕಾಯಿದೆಯನ್ನು ಹಿಂಪಡೆದು ಸಾವಿರ ರೂಪಾಯಿಗಳ ನೋಟನ್ನು
ಜಾರಿಗೆ ತಂದಿತು. ಕಳೆದ ವರ್ಷವೂ ಸಹ ಕಪ್ಪು ಹಣವನ್ನು ನಿಯಂತ್ರಿಸುವ ಉದ್ದೇಶದಿಂದ ಇದೇ ಮೋದಿ ಸರಕಾರವು
2005ಕ್ಕಿಂತಾ ಮುಂಚೆ ಮುದ್ರಣಗೊಂಡಿದ್ದ ಎಲ್ಲಾ 5೦೦ ರೂ ಬೆಲೆಯ ನೋಟುಗಳನ್ನು ಹಿಂಪಡೆಯಿತು. ಹೀಗೆ
ಕಾಲ ಕಾಲಕ್ಕೆ ನೋಟುಗಳ ಬದಲಾವಣೆ ನಡೆಯುತ್ತಲೇ ಇದೆ.
ಆದರೆ.. ಕಪ್ಪು ಹಣವಂತೂ ನಿಂತಿಲ್ಲ ಹಾಗೂ ನಿಯಂತ್ರಣಕ್ಕೂ ಬಂದಿಲ್ಲ. ದಿನದಿಂದ ದಿನಕ್ಕೆ
ಬಂಡವಾಳಿಗರ ವ್ಯಾಪಾರ ವಹಿವಾಟು ಹೆಚ್ಚಿದಂತೆಲ್ಲಾ ತೆರಿಗೆ ಕಳ್ಳತನ ಹೆಚ್ಚುತ್ತಲೇ ಇದೆ.. ಕಪ್ಪು ಹಣ
ಯಾವುಯಾವುದೋ ರೂಪದಲ್ಲಿ ರೂಪಾಂತರಗೊಳ್ಳುತ್ತಲೇ ಇದೆ. ಹಿಂದೆಯೂ ನೋಟುಗಳ ರದ್ದತಿಯಿಂದಾಗಿ ಕೇವಲ ಕೆಲವೇ
ಕೆಲವು ಶ್ರೀಮಂತರು ತೊಂದರೆಗೊಳಗಾಗಿದ್ದರು. ಆಗ ಜನಸಾಮಾನ್ಯರಲ್ಲಿ ದೊಡ್ಡ ಬೆಲೆಯ ನೋಟುಗಳು ಹೆಚ್ಚಾಗಿ
ಸಂಗ್ರಹವಾಗಿರಲಿಲ್ಲ. ಆದರೆ ಈಗ ಕಾಳಧನಿಕರಿಗಿಂತಾ
ಬಹುತೇಕ ಜನಸಾಮಾನ್ಯರು ವಿಪರೀತ ತೊಂದರೆಗೊಳಗಾಗಿದ್ದಾರೆ. ಯಾಕೆಂದರೆ ಈಗ ಬಹುತೇಕರ ಬಳಿ ಐನೂರು ಸಾವಿರ
ರೂಪಾಯಿಯ ನೋಟುಗಳು ಹರಿದಾಡುತ್ತಿವೆ. ಅವುಗಳ ಚಲಾವಣೆ ಇದ್ದಕ್ಕಿದಂತೆ ನಿಲ್ಲಿಸಿದ್ದರಿಂದ ಅಧೀಕೃತವಾಗಿ
ಬದಲಾವಣೆ ಮಾಡಿಕೊಳ್ಳಲು ಆಗದಿರುವ ದುಡಿಯುವ ಜನರು ತಮ್ಮಲ್ಲಿರುವ ನೋಟುಗಳ ಮಾನ್ಯತೆಯನ್ನೇ ಕಳೆದುಕೊಂಡು
ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಕಪ್ಪು ಹಣದ ಸಂಪಾದನೆ ಹಾಗೂ ಸಂಗ್ರಹ ನಿಲ್ಲುತ್ತದೆ
ಎನ್ನುವುದಂತೂ ಕನಸಿನ ಮಾತು...
ಆರೆಸ್ಸೆಸ್ ನಾಯಕ ಗೋವಿಂದಾಚಾರ್ಯರು ತಮ್ಮ ಫೇಸ್ಬುಕ್ಕಲ್ಲಿ "ಮೋದಿಯವರ ಈ ನೋಟು ಬದಲಾವಣೆಯು ಕಪ್ಪು ಹಣ ಹೊರತರುವಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯೆವಿಲ್ಲ. ಶೇಕಡಾ ಮೂರರಷ್ಟು ಬ್ಲಾಕ್ಮನಿ ಹೊರಗೆ ಬರಬಹುದಾಗಿದೆ" ಎಂದು ಬರೆದುಕೊಂಡಿದ್ದಾರೆ. ಸತ್ಯ ಸಂತನ ಬಾಯಲ್ಲಿ ಬರಲಿ ಇಲ್ಲವೇ ಸೈತಾನನ ಬಾಯಲ್ಲಿ ಬರಲಿ.. ಸತ್ಯ ಸತ್ಯವೇ ಆಗಿದೆ. ಅಸಂಖ್ಯಾತ ಜನರಿಗೆ ತೊಂದರೆಕೊಟ್ಟು ಬೆಟ್ಟ ಅಗಿದು ಇಲಿ ಹಿಡಿಯುವ ಕಾಯಕದಲ್ಲಿ ಮೋದಿ ಪಡೆ ನಿರತವಾಗಿದೆ. ಮೋದಿ ಭಕ್ತರು ಹೇಳುವಂತೆ ಈ ಆರ್ಥಿಕ ವಿಪ್ಲವ ಇದ್ದಕ್ಕಿದ್ದಂತೆ ಯಾರಿಗೂ ಸುಳಿವು ಕೊಡದಂತೆ ಘಟಿಸಿದ್ದಂತೂ ಅಲ್ಲವೇ ಅಲ್ಲ. ಇದರ ಬಗ್ಗೆ ಗುಜರಾತಿನ ಪತ್ರಿಕೆಯಲ್ಲಿ ಏಳು ತಿಂಗಳ ಹಿಂದೆ ಅಂದರೆ ಎಪ್ರಿಲ್ 1 ರಂದೇ ವರದಿ ಪ್ರಕಟವಾಗಿತ್ತು. ಗುಜರಾತಿನ ಸಮಸ್ತ ಮಾರವಾಡಿಗಳು ಹಾಗೂ ಕಪ್ಪುಹಣದ ಕುಳಗಳು ಜಾಗ್ರತವಾಗಿ ಐದು ತಿಂಗಳಲ್ಲಿ ತಮ್ಮ ಕಪ್ಪು ಹಣವನ್ನು ಸಾಧ್ಯವಾದಷ್ಟು ಬಿಳಿ ಗೊಳಿಸಿಕೊಂಡರು ಹಾಗೂ ಮಿಕ್ಕಿದ್ದನ್ನು ಡಾಲರ್ ಇಲ್ಲವೇ ಚಿನ್ನದ ರೂಪದಲ್ಲಿ ಪರಿವರ್ತಿಸಿಕೊಂಡು ಸೇಫ್ ಆದರು. ಹಾಗೆಯೇ ಸಂಘಪರಿವಾರದ ದೊಡ್ಡ ಕುಳಗಳಿಗೆ ಹಾಗೂ ಪೋಷಕರಿಗೆ ಮೊದಲೇ ವಿಷಯವನ್ನು ತಿಳಿಸಿಲಾಗಿತ್ತು. ಆದ್ದರಿಂದ ಅಂತವರೆಲ್ಲರೂ ತಮ್ಮ ಹಣ ಪರಿವರ್ತನೆಗೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಕ್ಕಿತು. ಅಕಸ್ಮಾತ್ ಯಾರಿಗೂ ತಿಳಿಸದೇ ಮೋದಿಯವರು ಈ ರೀತಿ ಕ್ರಮವನ್ನು ತೆಗೆದುಕೊಂಡಿದ್ದರೆ ಸಂಘಪರಿವಾರದವರೇ ಮೊದಲು ತಿರುಗಿ ಬೀಳುತ್ತಿದ್ದರು. ಆ ನಂತರ ಮೋದಿ ಬೆಂಬಲಿಗರಾದ ವ್ಯಾಪಾರಸ್ತರು ಹಾಗೂ ಬಂಡವಾಳಶಾಹಿಗಳು ತೀವ್ರವಾಗಿ ವಿರೋಧಿಸುತ್ತಿದ್ದರು. ಕಾರ್ಪೋರೇಟ್ ಕಂಪನಿಗಳಂತೂ ಮೋದಿ ವಿರುದ್ದ ಸಮರವನ್ನೇ ಸಾರುತ್ತಿದ್ದವು. ಆದರೆ ಇದ್ಯಾವುದೂ ಆಗಲೇ ಇಲ್ಲ.. ಯಾಕೆಂದರೆ ಅಂತವರಿಗೆಲ್ಲಾ ಮೊದಲೇ ವಿಷಯ ಗೊತ್ತು ಮಾಡಿಕೊಟ್ಟಿದ್ದರಿಂದ ಎಲ್ಲರೂ ಜಾಗೃತರಾಗಿ ತಮ್ಮ ಕಾಳಧನದ ರಕ್ಷಣೆಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು ಹಾಗೂ ಅದಕ್ಕೆ ಬೇಕಾದಷ್ಟು ಸಮಯವೂ ಅವರಿಗೆ ಸಿಕ್ಕಿತ್ತು. ದೇಶದ ಸಾಮಾನ್ಯ ಜನತೆ ಬೇಸ್ತುಬಿದ್ದು ಪರದಾಡುವಂತಾಯಿತು. ದೇಶದಾದ್ಯಂತ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾದಂತಾಯಿತು.
ಆರ್ಥಿಕ ತುರ್ತು ಪರಿಸ್ಥಿತಿ ಕುರಿತು ಹಾಗೂ ಕಪ್ಪುಹಣ ರದ್ದಾಗಬಹುದಾದ ಯೋಜನೆ ಕುರಿತು ಎಲ್ಲಕ್ಕಿಂತಲೂ ಮೊದಲು ಗೊತ್ತಾಗಿದ್ದು ಅಂಬಾನಿಗೆ. ಅದಕ್ಕಾಗಿಯೇ ಇರುವ ಕಪ್ಪು ಹಣವನ್ನು ವಿನಿಯೋಗಿಸಿ ಸೂಕ್ತ ವ್ಯವಸ್ಥೆಗಳಿಲ್ಲದಿದ್ದರೂ ಜಿಯೋ ಮೊಬೈಲ್ ನೆಟ್ವರ್ಕನ್ನು ಅವಸರದಲ್ಲಿ ಶುರುಮಾಡಲಾಯಿತು. ಕೊಟ್ಟ ಸೇವೆಗೆ ತಕ್ಕ ಹಣ ಕೊಡಲು ಹೇಳಿದರೆ ಹೆಚ್ಚು ಜನ ಜಿಯೋ ನೆಟ್ವರ್ಕಗೆ ಬರುವುದಿಲ್ಲ ಎಂದುಕೊಂಡು ಮೂರು ತಿಂಗಳುಗಳ ಕಾಲ ಪುಕ್ಕಟೆ ಸಿಮ್ ಹಾಗೂ ಕನೆಕ್ಷನ್ ಕೊಟ್ಟು ಕೊಟ್ಯಾಂತರ ಜನರನ್ನು ಆಕರ್ಷಿಸಲಾಯಿತು. ಹೀಗೆ ದೇಶಾದ್ಯಂತ ಸಂಪೂರ್ಣ ಉಚಿತ ಸಿಮ್, ಕಾಲ್ ಹಾಗೂ ಇಂಟರ್ನೆಟ್ಟನ್ನು ಕೊಟ್ಟ ಉದಾಹರಣೆ ಇಡೀ ದೇಶದಲ್ಲೇ ಇಲ್ಲ. ಆದರೆ..ಅಂಬಾನಿಯ ರಿಲಾಯನ್ಸ್ ಆ ಕೆಲಸ ಮಾಡಿತು. ಯಾಕೆಂದರೆ.. ಅದು ಇನ್ವೆಸ್ಟ್ ಮಾಡಿದ್ದು ತೆರಿಗೆ ಕಳ್ಳತನದಿಂದ ಉಳಿಸಿದ ಕಪ್ಪು ಹಣವನ್ನು. ಹಾಗೂ ಜನವರಿ 1 ರಿಂದ ಏನು ಜನರಿಂದ ಮೊಬೈಲ್ ಕರೆನ್ಸಿ ವಸೂಲಿ ಮಾಡಲಾಗುತ್ತದೆಯೋ ಅದೆಲ್ಲಾ ಬಿಳಿ ಹಣವಾಗಿ ರಿಲೈಯನ್ಸ್ ಅಕೌಂಟಲ್ಲಿ ಬಂದು ಬೀಳುತ್ತಿದೆ. ಹೇಗಿದೆ ನೋಡಿ ಬ್ರಹತ್ ಪ್ರಮಾಣದ ಅನಧೀಕೃತ ಕಪ್ಪು ಹಣವನ್ನು ನಿರಂತರ ಹರಿದು ಬರುವ ಅಧೀಕೃತ ಬಿಳಿ ಹಣವನ್ನಾಗಿ ಪರಿವರ್ತಿಸುವ ಐನಾತಿ ಐಡಿಯಾ... ಇಂತಹ ವಾಮಮಾರ್ಗಗಳನ್ನು ಬಳಸಿದ್ದರಿಂದಲೇ ಇಂದು ಅಂಬಾನಿ ದೇಶದ ನಂ.1 ಶ್ರೀಮಂತನಾಗಿದ್ದು. ಮೋದಿಯವರ ಬಿಜೆಪಿಯ ಆರ್ಥಿಕತೆಯ ಬೆನ್ನೆಲುಬಾದದ್ದು. ಯಾರು ಏನೇ ಹೇಳಲಿ ಈ ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ಯಾರ ಊಹೆಗೂ ನಿಲುಕದ ಬ್ರಹನ್ನಾಟಕ ನೇಪತ್ಯದಲ್ಲಿ ನಡೆದಿದೆ. ಇಲ್ಲಿ ಸಾವಿರಾರು ರೂಪಾಯಿಗಳ ಬದಲಾವಣೆಗಾಗಿ ಜನಸಾಮಾನ್ಯರ ಪರದಾಟ ಮುಂದುವರೆದಿದೆ.
ಇನ್ನೊಂದು ಮೂಲದ ಪ್ರಕಾರ... ಉತ್ತರ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಚಲಾವಣೆ ಮಾಡಲು ವಿರೋಧ ಪಕ್ಷಗಳಿಗೆ ಹಣಕಾಸಿನ ಬರವನ್ನು ಸೃಷ್ಟಿಸಲು ಮೋದಿ ಮಾಡಿದ ಮಾಸ್ಟರ್ ಪ್ಲಾನ್ ಇದೆಂದು ಹೇಳಲಾಗುತ್ತಿದೆ. ಕಾಂಗ್ರೆಸ್, ಸಮಾಜವಾದಿ, ಬಹುಜನ.. ಹೀಗೆ ಬಿಜೆಪಿಯ ವಿರೋಧಿ ಪಕ್ಷಗಳಲ್ಲಿಯೂ ಕೂಡಾ ಬಿಜೆಪಿಯಲ್ಲಿರುವಂತೆಯೇ ದೊಡ್ಡ ದೊಡ್ಡ ಕಪ್ಪುಹಣದ ದೈತ್ಯ ಕಳ್ಳರಿದ್ದಾರೆ. ಅಗಣಿತ ಹಣ ಭೂಗತವಾಗಿದೆ. ಅದೆಲ್ಲಾ ಮುಂಬರುವ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಳಕೆಯಾಗುತ್ತದೆ. ಆದ್ದರಿಂದ ಆ ಹಣವನ್ನೇ ಮೌಲ್ಯರಹಿತವಾಗಿಸಿಬಿಟ್ಟರೆ ವಿರೋಧ ಪಕ್ಷಗಳು ಅದು ಹೇಗೆ ಚುನಾವಣೆಗೆ ಬೇಕಾದ ಅಗಾಧ ಪ್ರಮಾಣದ ಹಣವನ್ನು ತರುತ್ತಾರೆ? ಎಂದುಕೊಂಡ ಮೋದಿ ಪಟಾಲಂ ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ಹಣಿಯಲು ಚುನಾವಣಾ ಸಂದರ್ಭದಲ್ಲಿ ಈ ತಂತ್ರಗಾರಿಕೆಯನ್ನು ಹೆಣೆದಂತಿದೆ. 1978ರಲ್ಲಿ ಮೊರಾರ್ಜಿ ದೇಸಾಯಿಯವರೂ ಸಹ ಕಾಂಗ್ರೆಸ್ಸನ್ನು ಮಣಿಸಲು ಇದೇ ತಂತ್ರಗಾರಿಕೆಯನ್ನು ಬಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಆರೆಸ್ಸೆಸ್ ನಾಯಕ ಗೋವಿಂದಾಚಾರ್ಯರು ತಮ್ಮ ಫೇಸ್ಬುಕ್ಕಲ್ಲಿ "ಮೋದಿಯವರ ಈ ನೋಟು ಬದಲಾವಣೆಯು ಕಪ್ಪು ಹಣ ಹೊರತರುವಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯೆವಿಲ್ಲ. ಶೇಕಡಾ ಮೂರರಷ್ಟು ಬ್ಲಾಕ್ಮನಿ ಹೊರಗೆ ಬರಬಹುದಾಗಿದೆ" ಎಂದು ಬರೆದುಕೊಂಡಿದ್ದಾರೆ. ಸತ್ಯ ಸಂತನ ಬಾಯಲ್ಲಿ ಬರಲಿ ಇಲ್ಲವೇ ಸೈತಾನನ ಬಾಯಲ್ಲಿ ಬರಲಿ.. ಸತ್ಯ ಸತ್ಯವೇ ಆಗಿದೆ. ಅಸಂಖ್ಯಾತ ಜನರಿಗೆ ತೊಂದರೆಕೊಟ್ಟು ಬೆಟ್ಟ ಅಗಿದು ಇಲಿ ಹಿಡಿಯುವ ಕಾಯಕದಲ್ಲಿ ಮೋದಿ ಪಡೆ ನಿರತವಾಗಿದೆ. ಮೋದಿ ಭಕ್ತರು ಹೇಳುವಂತೆ ಈ ಆರ್ಥಿಕ ವಿಪ್ಲವ ಇದ್ದಕ್ಕಿದ್ದಂತೆ ಯಾರಿಗೂ ಸುಳಿವು ಕೊಡದಂತೆ ಘಟಿಸಿದ್ದಂತೂ ಅಲ್ಲವೇ ಅಲ್ಲ. ಇದರ ಬಗ್ಗೆ ಗುಜರಾತಿನ ಪತ್ರಿಕೆಯಲ್ಲಿ ಏಳು ತಿಂಗಳ ಹಿಂದೆ ಅಂದರೆ ಎಪ್ರಿಲ್ 1 ರಂದೇ ವರದಿ ಪ್ರಕಟವಾಗಿತ್ತು. ಗುಜರಾತಿನ ಸಮಸ್ತ ಮಾರವಾಡಿಗಳು ಹಾಗೂ ಕಪ್ಪುಹಣದ ಕುಳಗಳು ಜಾಗ್ರತವಾಗಿ ಐದು ತಿಂಗಳಲ್ಲಿ ತಮ್ಮ ಕಪ್ಪು ಹಣವನ್ನು ಸಾಧ್ಯವಾದಷ್ಟು ಬಿಳಿ ಗೊಳಿಸಿಕೊಂಡರು ಹಾಗೂ ಮಿಕ್ಕಿದ್ದನ್ನು ಡಾಲರ್ ಇಲ್ಲವೇ ಚಿನ್ನದ ರೂಪದಲ್ಲಿ ಪರಿವರ್ತಿಸಿಕೊಂಡು ಸೇಫ್ ಆದರು. ಹಾಗೆಯೇ ಸಂಘಪರಿವಾರದ ದೊಡ್ಡ ಕುಳಗಳಿಗೆ ಹಾಗೂ ಪೋಷಕರಿಗೆ ಮೊದಲೇ ವಿಷಯವನ್ನು ತಿಳಿಸಿಲಾಗಿತ್ತು. ಆದ್ದರಿಂದ ಅಂತವರೆಲ್ಲರೂ ತಮ್ಮ ಹಣ ಪರಿವರ್ತನೆಗೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ಸಿಕ್ಕಿತು. ಅಕಸ್ಮಾತ್ ಯಾರಿಗೂ ತಿಳಿಸದೇ ಮೋದಿಯವರು ಈ ರೀತಿ ಕ್ರಮವನ್ನು ತೆಗೆದುಕೊಂಡಿದ್ದರೆ ಸಂಘಪರಿವಾರದವರೇ ಮೊದಲು ತಿರುಗಿ ಬೀಳುತ್ತಿದ್ದರು. ಆ ನಂತರ ಮೋದಿ ಬೆಂಬಲಿಗರಾದ ವ್ಯಾಪಾರಸ್ತರು ಹಾಗೂ ಬಂಡವಾಳಶಾಹಿಗಳು ತೀವ್ರವಾಗಿ ವಿರೋಧಿಸುತ್ತಿದ್ದರು. ಕಾರ್ಪೋರೇಟ್ ಕಂಪನಿಗಳಂತೂ ಮೋದಿ ವಿರುದ್ದ ಸಮರವನ್ನೇ ಸಾರುತ್ತಿದ್ದವು. ಆದರೆ ಇದ್ಯಾವುದೂ ಆಗಲೇ ಇಲ್ಲ.. ಯಾಕೆಂದರೆ ಅಂತವರಿಗೆಲ್ಲಾ ಮೊದಲೇ ವಿಷಯ ಗೊತ್ತು ಮಾಡಿಕೊಟ್ಟಿದ್ದರಿಂದ ಎಲ್ಲರೂ ಜಾಗೃತರಾಗಿ ತಮ್ಮ ಕಾಳಧನದ ರಕ್ಷಣೆಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು ಹಾಗೂ ಅದಕ್ಕೆ ಬೇಕಾದಷ್ಟು ಸಮಯವೂ ಅವರಿಗೆ ಸಿಕ್ಕಿತ್ತು. ದೇಶದ ಸಾಮಾನ್ಯ ಜನತೆ ಬೇಸ್ತುಬಿದ್ದು ಪರದಾಡುವಂತಾಯಿತು. ದೇಶದಾದ್ಯಂತ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾದಂತಾಯಿತು.
ಆರ್ಥಿಕ ತುರ್ತು ಪರಿಸ್ಥಿತಿ ಕುರಿತು ಹಾಗೂ ಕಪ್ಪುಹಣ ರದ್ದಾಗಬಹುದಾದ ಯೋಜನೆ ಕುರಿತು ಎಲ್ಲಕ್ಕಿಂತಲೂ ಮೊದಲು ಗೊತ್ತಾಗಿದ್ದು ಅಂಬಾನಿಗೆ. ಅದಕ್ಕಾಗಿಯೇ ಇರುವ ಕಪ್ಪು ಹಣವನ್ನು ವಿನಿಯೋಗಿಸಿ ಸೂಕ್ತ ವ್ಯವಸ್ಥೆಗಳಿಲ್ಲದಿದ್ದರೂ ಜಿಯೋ ಮೊಬೈಲ್ ನೆಟ್ವರ್ಕನ್ನು ಅವಸರದಲ್ಲಿ ಶುರುಮಾಡಲಾಯಿತು. ಕೊಟ್ಟ ಸೇವೆಗೆ ತಕ್ಕ ಹಣ ಕೊಡಲು ಹೇಳಿದರೆ ಹೆಚ್ಚು ಜನ ಜಿಯೋ ನೆಟ್ವರ್ಕಗೆ ಬರುವುದಿಲ್ಲ ಎಂದುಕೊಂಡು ಮೂರು ತಿಂಗಳುಗಳ ಕಾಲ ಪುಕ್ಕಟೆ ಸಿಮ್ ಹಾಗೂ ಕನೆಕ್ಷನ್ ಕೊಟ್ಟು ಕೊಟ್ಯಾಂತರ ಜನರನ್ನು ಆಕರ್ಷಿಸಲಾಯಿತು. ಹೀಗೆ ದೇಶಾದ್ಯಂತ ಸಂಪೂರ್ಣ ಉಚಿತ ಸಿಮ್, ಕಾಲ್ ಹಾಗೂ ಇಂಟರ್ನೆಟ್ಟನ್ನು ಕೊಟ್ಟ ಉದಾಹರಣೆ ಇಡೀ ದೇಶದಲ್ಲೇ ಇಲ್ಲ. ಆದರೆ..ಅಂಬಾನಿಯ ರಿಲಾಯನ್ಸ್ ಆ ಕೆಲಸ ಮಾಡಿತು. ಯಾಕೆಂದರೆ.. ಅದು ಇನ್ವೆಸ್ಟ್ ಮಾಡಿದ್ದು ತೆರಿಗೆ ಕಳ್ಳತನದಿಂದ ಉಳಿಸಿದ ಕಪ್ಪು ಹಣವನ್ನು. ಹಾಗೂ ಜನವರಿ 1 ರಿಂದ ಏನು ಜನರಿಂದ ಮೊಬೈಲ್ ಕರೆನ್ಸಿ ವಸೂಲಿ ಮಾಡಲಾಗುತ್ತದೆಯೋ ಅದೆಲ್ಲಾ ಬಿಳಿ ಹಣವಾಗಿ ರಿಲೈಯನ್ಸ್ ಅಕೌಂಟಲ್ಲಿ ಬಂದು ಬೀಳುತ್ತಿದೆ. ಹೇಗಿದೆ ನೋಡಿ ಬ್ರಹತ್ ಪ್ರಮಾಣದ ಅನಧೀಕೃತ ಕಪ್ಪು ಹಣವನ್ನು ನಿರಂತರ ಹರಿದು ಬರುವ ಅಧೀಕೃತ ಬಿಳಿ ಹಣವನ್ನಾಗಿ ಪರಿವರ್ತಿಸುವ ಐನಾತಿ ಐಡಿಯಾ... ಇಂತಹ ವಾಮಮಾರ್ಗಗಳನ್ನು ಬಳಸಿದ್ದರಿಂದಲೇ ಇಂದು ಅಂಬಾನಿ ದೇಶದ ನಂ.1 ಶ್ರೀಮಂತನಾಗಿದ್ದು. ಮೋದಿಯವರ ಬಿಜೆಪಿಯ ಆರ್ಥಿಕತೆಯ ಬೆನ್ನೆಲುಬಾದದ್ದು. ಯಾರು ಏನೇ ಹೇಳಲಿ ಈ ನೋಟು ಬದಲಾವಣೆ ಪ್ರಕ್ರಿಯೆಯಲ್ಲಿ ಯಾರ ಊಹೆಗೂ ನಿಲುಕದ ಬ್ರಹನ್ನಾಟಕ ನೇಪತ್ಯದಲ್ಲಿ ನಡೆದಿದೆ. ಇಲ್ಲಿ ಸಾವಿರಾರು ರೂಪಾಯಿಗಳ ಬದಲಾವಣೆಗಾಗಿ ಜನಸಾಮಾನ್ಯರ ಪರದಾಟ ಮುಂದುವರೆದಿದೆ.
ಇನ್ನೊಂದು ಮೂಲದ ಪ್ರಕಾರ... ಉತ್ತರ ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಚಲಾವಣೆ ಮಾಡಲು ವಿರೋಧ ಪಕ್ಷಗಳಿಗೆ ಹಣಕಾಸಿನ ಬರವನ್ನು ಸೃಷ್ಟಿಸಲು ಮೋದಿ ಮಾಡಿದ ಮಾಸ್ಟರ್ ಪ್ಲಾನ್ ಇದೆಂದು ಹೇಳಲಾಗುತ್ತಿದೆ. ಕಾಂಗ್ರೆಸ್, ಸಮಾಜವಾದಿ, ಬಹುಜನ.. ಹೀಗೆ ಬಿಜೆಪಿಯ ವಿರೋಧಿ ಪಕ್ಷಗಳಲ್ಲಿಯೂ ಕೂಡಾ ಬಿಜೆಪಿಯಲ್ಲಿರುವಂತೆಯೇ ದೊಡ್ಡ ದೊಡ್ಡ ಕಪ್ಪುಹಣದ ದೈತ್ಯ ಕಳ್ಳರಿದ್ದಾರೆ. ಅಗಣಿತ ಹಣ ಭೂಗತವಾಗಿದೆ. ಅದೆಲ್ಲಾ ಮುಂಬರುವ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಳಕೆಯಾಗುತ್ತದೆ. ಆದ್ದರಿಂದ ಆ ಹಣವನ್ನೇ ಮೌಲ್ಯರಹಿತವಾಗಿಸಿಬಿಟ್ಟರೆ ವಿರೋಧ ಪಕ್ಷಗಳು ಅದು ಹೇಗೆ ಚುನಾವಣೆಗೆ ಬೇಕಾದ ಅಗಾಧ ಪ್ರಮಾಣದ ಹಣವನ್ನು ತರುತ್ತಾರೆ? ಎಂದುಕೊಂಡ ಮೋದಿ ಪಟಾಲಂ ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ಹಣಿಯಲು ಚುನಾವಣಾ ಸಂದರ್ಭದಲ್ಲಿ ಈ ತಂತ್ರಗಾರಿಕೆಯನ್ನು ಹೆಣೆದಂತಿದೆ. 1978ರಲ್ಲಿ ಮೊರಾರ್ಜಿ ದೇಸಾಯಿಯವರೂ ಸಹ ಕಾಂಗ್ರೆಸ್ಸನ್ನು ಮಣಿಸಲು ಇದೇ ತಂತ್ರಗಾರಿಕೆಯನ್ನು ಬಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ರೋಗದ ಮೂಲಕ್ಕೆ ಮದ್ದರಿಯದೇ ಕೇವಲ ತಕ್ಷಣದ ಪರಿಣಾಮಕ್ಕೆ ಆಂಟಿಬಯಾಟಿಕ್ಸ್ ಕೊಟ್ಟು
ಸೈಡ್ ಎಫೆಕ್ಟಗಳನ್ನು ಅನುಭವಿಸುವಂತಿದೆ ಈ ಆರ್ಥಿಕ ಬದಲಾವಣೆ. ಈ ದೇಶದ ಬಹುತೇಕ ಸಮಸ್ಯೆಗಳ ಮೂಲ ಇರುವುದು
ಅನಿಯಂತ್ರಿತ ಬ್ರಷ್ಟಾಚಾರದಲ್ಲಿ. ಎಲ್ಲಿವರೆಗೂ ಬ್ರಷ್ಟಾಚಾರವೆನ್ನುವುದು ಶಾಸಕಾಂಗ, ಕಾರ್ಯಾಂಗ ಮತ್ತು
ನ್ಯಾಯಾಂಗಗಳಲ್ಲಿ ಹಾಸುಹೊಕ್ಕಾಗಿರುತ್ತದೋ ಅಲ್ಲಿವರೆಗೂ
ಅದೆಂತಹ ಆರ್ಥಿಕ ಸುಧಾರಣೆಗಳನ್ನು ತಂದರೂ ಅದು ಮತ್ತೆ ಉಳ್ಳವರ ಪರವಾಗಿಯೇ ಇರುತ್ತದೆಯೇ ಹೊರತು ದುಡಿಯುವ
ವರ್ಗಗಳ ಪರವಾಗಿಯಂತೂ ಅಲ್ಲವೇ ಅಲ್ಲ. ಅಧೀಕೃತ ವಹಿವಾಟುದಾರರಾದ ಬಂಡವಾಳಿಗ ಕಂಪನಿಗಳು ಆಳುವ ವ್ಯವಸ್ಥೆಯೊಳಗಿನ
ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೌಕರರನ್ನು ಕೊಂಡುಕೊಂಡು ದೇಶದ ಸಂಪನ್ಮೂಲಗಳನ್ನು ಅಧೀಕೃತವಾಗಿಯೇ
ಲೂಟಿಹೊಡೆಯುವುದರಲ್ಲಿ ಸಂದೇಹವಿಲ್ಲ. ಪ್ರಧಾನಿ ಮೋದಿಯವರಿಗೆ
ನಿಜಕ್ಕೂ ಈ ದೇಶದ ಬಗ್ಗೆ ಕಾಳಜಿ ಹಾಗೂ ದುಡಿಯುವ ಬಹುಸಂಖ್ಯಾತ ಜನರ ಬಗ್ಗೆ ಕಳಕಳಿ ಇದ್ದಲ್ಲಿ ಮೊದಲು
ಬ್ರಷ್ಟಾಚಾರ ಮುಕ್ತ ಭಾರತವನ್ನು ಮಾಡಲು ಪ್ರಯತ್ನಿಸಲಿ. ಎಲ್ಲಿವರೆಗೂ ಈ ದೇಶದಲ್ಲಿ ಬ್ರಷ್ಟಾಚಾರ ಎನ್ನುವುದು
ಸರ್ವವ್ಯಾಪಿಯಾಗಿರುವುದೋ ಅಲ್ಲಿವರೆಗೂ ಯಾವುದೇ ಆರ್ಥಿಕ ಸುಧಾರಣೆ ತಂದರೂ ಅದು ತುಘಲಕ್ ಆಡಳಿತವೇ ಆಗುತ್ತದೆ.
ತುಘಲಕ್ ನಾಟಕದ ಅಜೀಜನಂತಹ ಬಹುರೂಪಿ ಕಳ್ಳರ ಸಂತಾನ ದೇಶಾದ್ಯಂತ ತುಂಬಿದೆ. ನೈತಿಕ ಪ್ರಜ್ಞೆ ಎನ್ನುವುದೇ
ಸತ್ತ ದೇಶದಲ್ಲಿ ಎಂತಹ ಬದಲಾವಣೆ ತಂದರೂ ಅದು ಹೇಗೆ ಯಶಸ್ವಿಯಾದೀತು? ಕಳ್ಳರನ್ನು ಹಿಡಿಯಲು ನಿಯಮಿಸಿದ
ಪೊಲೀಸರುಗಳೇ ಕಳ್ಳರ ಜೊತೆ ಶಾಮೀಲಾಗಿ ಜನಸಾಮಾನ್ಯರನ್ನು ದೋಚುವ ಅವ್ಯವಸ್ಥೆಯಲ್ಲಿ ಅದೆಂತಾ ಆರ್ಥಿಕ
ನೀತಿ ಫಲಿಸೀತು? ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಮನುಷ್ಯ ಸಂಬಂಧಗಳಿಗಿಂತಾ ಸ್ವಾರ್ಥ ಹಾಗೂ ಲಾಭವೆನ್ನುವುದೇ
ಬದುಕಾಗಿರುವಾಗ ಮಾನವೀಯತೆ ಎನ್ನುವುದು ಹೇಗೆ ಉಳಿದೀತು? ಓಟಿಗಾಗಿ ಹಾಗೂ ನೋಟಿಗಾಗಿ ಇಡೀ ವ್ಯವಸ್ಥೆಯೇ
ಕರಪ್ಟ್ ಆಗಿರುವಾಗ ಜನಸಾಮನ್ಯರ ಬದುಕು ಯಾವಾಗ ಹಸನಾದೀತು?
-ಶಶಿಕಾಂತ ಯಡಹಳ್ಳಿ
you are right sir ,
ಪ್ರತ್ಯುತ್ತರಅಳಿಸಿ