ಕಾವ್ಯ ಹುಟ್ಟೋದೆ
ವಿರಹದಲ್ಲಿ
ಕವಿತೆಗೆಲ್ಲಿದೆ ಸಮಯ
ಪ್ರೇಮದಲ್ಲಿ..
* * *
ಎಲ್ಲರೂ ಮಾಡ್ತಾರಂತ ನಾನೂ ಪ್ರೀತಿಸಿದೆ
ಸಿಹಿಜೀನು ಸಿಕ್ಕಿತೆಂದು ಸುಖಿಸಿದೆ
ಜೇನುಗೂಡಿಗೆ ಹಾಕಿದ್ದೆ ಕೈ
ಗಾಸಿ ಆಯ್ತು ಮನಸು ಮೈ...
* * *
ಆಕೆ ಹೇಳಿದಂತೆ ನಾ ಕೇಳಿದರವಳು
ಸೂಜಿಮಲ್ಲಿ....
ಮರಳಿ ಪ್ರಶ್ನಿಸಿದ ಮರುಕ್ಷಣ
ನಾಗವಲ್ಲಿ...
ಈ ಸತ್ಯ ಗೊತ್ತಿದ್ದೂ
ಪ್ರೀತಿಸುವ ನನಗೆ
ದಯವಿಟ್ಟು ಗುಂಡಿಕ್ಕಿ ಕಂಡಕಂಡಲ್ಲಿ.....
* * *
ಹುಡುಗಿಯರು ಬಲು ಕೆಟ್ಟ ಬಾಡಿಗೆದಾರರು
ಮೊದಲು ನಿಮ್ಮ ಹೃದಯವನ್ನು ಆಕ್ರಮಿಸಿಕೊಳ್ಳುತ್ತಾರೆ
ಸುಲಭವಾಗಿ ಜಾಗ ಖಾಲಿ ಮಾಡುವುದಿಲ್ಲ...
ಎಂದೂ ಬಾಡಿಗೆಯನ್ನೂ ಕೊಡುವುದಿಲ್ಲ....
ಖಾಲಿ ಮಾಡಿ ಹೋಗುವಾಗ ಹೃದಯ ಒಡೆದು ಹೋಗುತ್ತಾರೆ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ