ತಹ ತಹ – 10
ವಿಫಲ ನಿರ್ದೇಶಕರಿಂದ, ವಿಫಲ ರಂಗತಂಡದಿಂದ, ವಿಫಲ ಕಲಾವಿದರಿಂದ ಹೊಸ ನಾಟಕ "ಕೊಂದವರ್ಯಾರು"? ಎನ್ನುವ ಸುದ್ದಿಯನ್ನು ಫೇಸ್ಬುಕ್ಕಲ್ಲಿ ಓದಿ ಮನಸ್ಸು ತಲ್ಲಣಗೊಂಡಿತು. ರಂಗಕರ್ಮಿಗಳನ್ನು ಈ ರೀತಿಯ ಹತಾಶೆಗೆ ತಳ್ಳಿದ ಈ ಸರಕಾರಿ ಪ್ರಾಜೆಕ್ಟಗಳು ಹಾಗೂ ಅದರ ಉಸ್ತುವಾರಿ ಹೊತ್ತ ಸರಕಾರಿ ಕೃಪಾ ಪೋಷಿತ ಗುತ್ತಿಗೆದಾರರ ಕುರಿತು ನಿಜಕ್ಕೂ ಬೇಸರವಾಯಿತು.
ಆಗಿದ್ದಿಷ್ಟೇ... ಮೇಲೆ ತಿಳಿಸಿದಂತೆ ತಮ್ಮ ನೋವನ್ನು ಹಾಗೂ ಅನ್ಯಾಯದ ವಿರುದ್ಧ ತಮ್ಮ ಸಾತ್ವಿಕ ಪ್ರತಿಭಟನೆಯನ್ನು ಬಹಿರಂಗವಾಗಿ ತೋರ್ಪಡಿಸಿದ್ದು ಗುಲಬರ್ಗಾದ ರಂಗಕರ್ಮಿ ವಿಶ್ವರಾಜ್. ನೀನಾಸಮ್ ಪದವೀಧರರಾದ ಇವರು ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ವಿಶ್ವರಂಗ ಎನ್ನುವ ರಂಗತಂಡವನ್ನು ಕಟ್ಟಿಕೊಂಡು ತಮ್ಮದೇ ಇತಿಮಿತಿಯಲ್ಲಿ ರಂಗಚಟುವಟಿಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಸಂಸ್ಕೃತಿ ಇಲಾಖೆಯ ಕೋರಿಕೆಯ ಮೇರೆಗೆ ಅರಸು ರಂಗೋತ್ಸವಕ್ಕೆ ವಿಶ್ವರಾಜ್ 'ಜನಸಾಮಾನ್ಯರ ಅರಸು' ಎನ್ನುವ ನಾಟಕ ನಿರ್ದೇಶಿಸಿದ್ದರು. ಮಾರ್ಚ್ 8 ರಂದು ನಡೆದ ಅರಸು ರಂಗೋತ್ಸವದ ಸಮಾರೋಪದಂದು ಈ ನಾಟಕ ಪ್ರದರ್ಶನಗೊಂಡಿತು.
ಆದರೆ ಈ ನಾಟಕ ಇನ್ನೂ ಸಂಪೂರ್ಣ ಪ್ರದರ್ಶನಯೋಗ್ಯವಾಗಿರಲಿಲ್ಲ. ಇದೇ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಇನ್ನೂ ಮೂರು ನಾಟಕಗಳಲ್ಲೂ ಕೂಡಾ ಹಲವಾರು ನ್ಯೂನ್ಯತೆಗಳಿದ್ದವು. ಆದರೆ ಆ ಮೂರೂ ನಾಟಕಗಳನ್ನು ಮುಂದಿನ ಪ್ರದರ್ಶನಕ್ಕೆ ಆಯ್ಕೆ ಮಾಡಿದ ಸಾಂಸ್ಕೃತಿಕ ಕಮಿಟಿ ವಿಶ್ವರಾಜರವರ ನಿರ್ದೇಶನದ ನಾಟಕವನ್ನು ಸಂಪೂರ್ಣ ರದ್ದು ಮಾಡಿ ಶ್ರೀಮಾನ್ಯ ಚೌಗಲೆ ಸಾಹೇಬರಿಗೆ ಹೊಸದಾಗಿ ನಾಟಕ ಬರೆಯಲು ವಹಿಸಿತು.
ಯಾವುದೇ ನಾಟಕವಿರಲಿ ಮೊಟ್ಟ ಮೊದಲ ಪ್ರದರ್ಶನದಲ್ಲೇ ಪರಿಪೂರ್ಣವಾಗುವುದಿಲ್ಲ. ಅದಕ್ಕೇನೆ ನಾಟಕದ ಪ್ರದರ್ಶನಗಳನ್ನು ಪ್ರಯೋಗ ಎನ್ನುವುದು. ಪ್ರದರ್ಶನದಿಂದ ಪ್ರದರ್ಶನಕ್ಕೆ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ನಿರಂತರ ಬದಲಾವಣೆ ಹೊಂದುತ್ತಾ ಬೆಳೆಯುವುದೇ ನಾಟಕಕಲೆ ಎನ್ನುವುದು ಅರಸು ಸಾಂಸ್ಕೃತಿಕ ಉಪಸಮಿತಿಯ ಅಧ್ಯಕ್ಷರಾದ ಸಿ.ಬಸವಲಿಂಗಯ್ಯನವರಿಗೆ ತಿಳಿಯದ್ದೇನಲ್ಲ. ಮರು ಪ್ರದರ್ಶನದಲ್ಲಿ ಸರಿಹೋಗಬಹುದಾದ ನಾಟಕವೊಂದನ್ನು ಕಳಪೆ ಎಂದು ಹೇಳಿ ರದ್ದು ಮಾಡಿದ್ದಂತೂ ಅಕ್ಷಮ್ಯ.
ಸರಕಾರದ ಇಲಾಖೆ ಹಣ ಕೊಡಬಹುದು. ಆದರೆ ಒಂದು ನಾಟಕದ ತಯಾರಿಯ ಹಿಂದೆ ಅದೆಷ್ಟು ಕಲಾವಿದರ, ನೇಪತ್ಯ ರಂಗತಜ್ಞರ ಪರಿಶ್ರಮ ಇರುತ್ತದೆ. ತಿದ್ದಿಕೊಳ್ಳಲು ಅವಕಾಶವನ್ನೂ ಕೊಡದೇ ನಾಟಕವನ್ನು ರದ್ದು ಮಾಡುವುದು ನಾಟಕ ಕಟ್ಟುವಲ್ಲಿ ಶ್ರಮಿಸಿದ ರಂಗಕರ್ಮಿ ಕಲಾವಿದರುಗಳಿಗೆ ಮಾಡುವ ಅವಮಾನವಾಗಿದೆ...
ಇಷ್ಟಕ್ಕೂ ಅರಸು ನಾಟಕ ಬರೆಯಿಸಿ ಕೊಡುವುದು ಇದೇ ಸಾಂಸ್ಕೃತಿಕ ಕಮಿಟಿಯ ಹೊಣೆಗಾರಿಕೆಯಾಗಿತ್ತು. ಅದಕ್ಕೊಂದು ಪೂರ್ವಭಾವಿಯಾಗಿ ಎರಡು ಹಂತದ ನಾಟಕಕಾರರ ಶಿಬಿರ ಮಾಡಲಾಗಿತ್ತು. ಕಲಬುರಗಿ ವಿಭಾಗದ ತಂಡಕ್ಕೆ ನಾಟಕ ಬರೆಯುವ ಜವಾಬ್ದಾರಿಯನ್ನು ಕೃಷ್ಣಮೂರ್ತಿ ಬಿಳಿಗೆರೆಯವರಿಗೆ ವಹಿಸಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ಬರೆಯಲೇ ಇಲ್ಲ. ಸಮಯದ ಅಭಾವದಲ್ಲೂ ಶಂಕರಯ್ಯ ಗಂಟಿಯವರು ಸಂತೆಹೊತ್ತಿಗೆ ಮೂರು ಮೊಳ ನಾಟಕವನ್ನು ಅದು ಹೇಗೋ ಕಟ್ಟಿಕೊಟ್ಟರು. ಇದಕ್ಕೆ ನಿರ್ದೇಶಕರು ಹಾಗೂ ಕಲಾವಿದರು ಹೇಗೆ ಹೊಣೆಗಾರರಾಗುತ್ತಾರೆ. ಸಿಕ್ಕ ರಂಗಪಠ್ಯವನ್ನೇ ನಾಟಕವಾಗಿಸಿ ತಮ್ಮ ರಂಗಬದ್ದತೆಯನ್ನು ವಿಶ್ವರಾಜ್ ನಿರ್ವಹಿಸಲು ಶಕ್ತಿಮೀರಿ ಪ್ರಯತ್ನಿಸಿದರು. ಸರಿಯಾದ ಸಮಯಕ್ಕೆ ಹಣ ಕೂಡಾ ಬಿಡುಗಡೆಯಾಗದೇ ಸಾಲ ತಂದು ನಾಟಕಕ್ಕೆ ಬೇಕಾದ ಖರ್ಚುಗಳನ್ನು ವಿಶ್ವರಾಜ್ ಹಾಗೂ ಗೆಳೆಯರು ನಿಭಾಯಿಸಿದರು. ಒಳ್ಳೆಯ ನಾಟಕ ಕೊಟ್ಟು..ತಾಲೀಮು ಹಾಗೂ ನಾಟಕದ ತಯಾರಿಗೆ ಸಮಯ ಕೊಟ್ಟು, ಬೇಕಾದ ಹಣವನ್ನು ಒದಗಿಸಿದಾಗಲೂ ನಾಟಕದ ಕ್ವಾಲಿಟಿ ಕಡಿಮೆಯಾದರೆ ನಿರ್ದೇಶಕರನ್ನು ಹೊಣೆಗಾರರನ್ನಾಗಿಸಿ ತಲೆದಂಡ ಕೇಳಬಹುದು. ಆದರೆ ಮೂಲ ತಪ್ಪು ಇರುವುದೇ ಸಾಂಸ್ಕೃತಿಕ ಉಪಸಮಿತಿಯ ತಲೆಯಾಳುಗಳಲ್ಲಿ. ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ನಿರ್ದೇಶಕರ ಮೇಲೆ ಆರೋಪ ಹೊರೆಸಿ ನಾಟಕವನ್ನೇ ರದ್ದು ಮಾಡಿದ್ದು ಪಕ್ಕಾ ರಂಗವಿರೋಧಿ ಕ್ರಿಯೆಯಾಗಿದೆ. ಇನ್ನಷ್ಟು ಸಮಯ ಕೊಟ್ಟು, ಒಪ್ಪಿಕೊಂಡಷ್ಟು ಹಣ ಸಕಾಲಕ್ಕೆ ಒದಗಿಸಿ.. ರಂಗಪಠ್ಯದಲ್ಲಿ ಆಗಬೇಕಾದ ಬದಲಾವಣೆಗಳನ್ನು ಸೂಚಿಸಿ ಅದೇ ತಂಡದವರಿಂದ ಪರಿಷ್ಕೃತ ನಾಟಕ ಮಾಡಿಸಿದ್ದರೆ ಸಿ.ಬಸವಲಿಂಗಯ್ಯ, ಡಾ.ಕೆವೈಎನ್ ರವರಂತವರ ಗೌರವ ಇನ್ನೂ ಹೆಚ್ಚುತ್ತಿತ್ತು. ಆದರೆ ಒಂದು ರಂಗತಂಡದ ಉತ್ಸಾಹಕ್ಕೆ ತಣ್ಣೀರೆರಚಿದ ಇವರೆಂತಾ ರಂಗಕರ್ಮಿಗಳು? ಕಲಾವಿದರನ್ನು ಅವಮಾನಿಸುವ ಇವರೆಂತಾ ಕಲಾಪೊಷಕರು?
ಇಷ್ಟಕ್ಕೂ ಅರಸು ನಾಟಕ ಬರೆಯಿಸಿ ಕೊಡುವುದು ಇದೇ ಸಾಂಸ್ಕೃತಿಕ ಕಮಿಟಿಯ ಹೊಣೆಗಾರಿಕೆಯಾಗಿತ್ತು. ಅದಕ್ಕೊಂದು ಪೂರ್ವಭಾವಿಯಾಗಿ ಎರಡು ಹಂತದ ನಾಟಕಕಾರರ ಶಿಬಿರ ಮಾಡಲಾಗಿತ್ತು. ಕಲಬುರಗಿ ವಿಭಾಗದ ತಂಡಕ್ಕೆ ನಾಟಕ ಬರೆಯುವ ಜವಾಬ್ದಾರಿಯನ್ನು ಕೃಷ್ಣಮೂರ್ತಿ ಬಿಳಿಗೆರೆಯವರಿಗೆ ವಹಿಸಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ಬರೆಯಲೇ ಇಲ್ಲ. ಸಮಯದ ಅಭಾವದಲ್ಲೂ ಶಂಕರಯ್ಯ ಗಂಟಿಯವರು ಸಂತೆಹೊತ್ತಿಗೆ ಮೂರು ಮೊಳ ನಾಟಕವನ್ನು ಅದು ಹೇಗೋ ಕಟ್ಟಿಕೊಟ್ಟರು. ಇದಕ್ಕೆ ನಿರ್ದೇಶಕರು ಹಾಗೂ ಕಲಾವಿದರು ಹೇಗೆ ಹೊಣೆಗಾರರಾಗುತ್ತಾರೆ. ಸಿಕ್ಕ ರಂಗಪಠ್ಯವನ್ನೇ ನಾಟಕವಾಗಿಸಿ ತಮ್ಮ ರಂಗಬದ್ದತೆಯನ್ನು ವಿಶ್ವರಾಜ್ ನಿರ್ವಹಿಸಲು ಶಕ್ತಿಮೀರಿ ಪ್ರಯತ್ನಿಸಿದರು. ಸರಿಯಾದ ಸಮಯಕ್ಕೆ ಹಣ ಕೂಡಾ ಬಿಡುಗಡೆಯಾಗದೇ ಸಾಲ ತಂದು ನಾಟಕಕ್ಕೆ ಬೇಕಾದ ಖರ್ಚುಗಳನ್ನು ವಿಶ್ವರಾಜ್ ಹಾಗೂ ಗೆಳೆಯರು ನಿಭಾಯಿಸಿದರು. ಒಳ್ಳೆಯ ನಾಟಕ ಕೊಟ್ಟು..ತಾಲೀಮು ಹಾಗೂ ನಾಟಕದ ತಯಾರಿಗೆ ಸಮಯ ಕೊಟ್ಟು, ಬೇಕಾದ ಹಣವನ್ನು ಒದಗಿಸಿದಾಗಲೂ ನಾಟಕದ ಕ್ವಾಲಿಟಿ ಕಡಿಮೆಯಾದರೆ ನಿರ್ದೇಶಕರನ್ನು ಹೊಣೆಗಾರರನ್ನಾಗಿಸಿ ತಲೆದಂಡ ಕೇಳಬಹುದು. ಆದರೆ ಮೂಲ ತಪ್ಪು ಇರುವುದೇ ಸಾಂಸ್ಕೃತಿಕ ಉಪಸಮಿತಿಯ ತಲೆಯಾಳುಗಳಲ್ಲಿ. ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ನಿರ್ದೇಶಕರ ಮೇಲೆ ಆರೋಪ ಹೊರೆಸಿ ನಾಟಕವನ್ನೇ ರದ್ದು ಮಾಡಿದ್ದು ಪಕ್ಕಾ ರಂಗವಿರೋಧಿ ಕ್ರಿಯೆಯಾಗಿದೆ. ಇನ್ನಷ್ಟು ಸಮಯ ಕೊಟ್ಟು, ಒಪ್ಪಿಕೊಂಡಷ್ಟು ಹಣ ಸಕಾಲಕ್ಕೆ ಒದಗಿಸಿ.. ರಂಗಪಠ್ಯದಲ್ಲಿ ಆಗಬೇಕಾದ ಬದಲಾವಣೆಗಳನ್ನು ಸೂಚಿಸಿ ಅದೇ ತಂಡದವರಿಂದ ಪರಿಷ್ಕೃತ ನಾಟಕ ಮಾಡಿಸಿದ್ದರೆ ಸಿ.ಬಸವಲಿಂಗಯ್ಯ, ಡಾ.ಕೆವೈಎನ್ ರವರಂತವರ ಗೌರವ ಇನ್ನೂ ಹೆಚ್ಚುತ್ತಿತ್ತು. ಆದರೆ ಒಂದು ರಂಗತಂಡದ ಉತ್ಸಾಹಕ್ಕೆ ತಣ್ಣೀರೆರಚಿದ ಇವರೆಂತಾ ರಂಗಕರ್ಮಿಗಳು? ಕಲಾವಿದರನ್ನು ಅವಮಾನಿಸುವ ಇವರೆಂತಾ ಕಲಾಪೊಷಕರು?
ಅರಸು ರಂಗೋತ್ಸವಕ್ಕೆ ಕರ್ನಾಟಕದ ನಾಲ್ಕು ಪ್ರದೇಶಗಳಿಂದ ನಾಲ್ಕು ನಾಟಕ ಮಾಡಿಸುವುದು ಸರಕಾರಿ ಇಲಾಖೆಯ ಉದ್ದೇಶವಾಗಿತ್ತು. ಮೊದಲೆ ಎಲ್ಲಾ ರಂಗದಲ್ಲೂ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕಕ್ಕೆ ಹೆಚ್ಚಿನ ಕಾಳಜಿ ಸವಲತ್ತು ಕೊಡಬೇಕಾಗಿತ್ತು. ಆದರೆ ಕೊಟ್ಟ ಅವಕಾಶವನ್ನೂ ನೆಪ ಹೇಳಿ ಕಿತ್ತುಕೊಂಡಿರುವುದು ಪ್ರಾದೇಶಿಕ ಅನ್ಯಾಯವಾಗಿದೆ. ಬಲಿತ ಪ್ರದೇಶದ ರಂಗಕರ್ಮಿ ಹಾಗೂ ಅಧಿಕಾರಿಗಳು ಸೇರಿ ದಮನಿತ ಪ್ರದೇಶದ ರಂಗಕರ್ಮಿಗಳ ಮೇಲೆ ಮಾಡಿದ ದಬ್ಬಾಳಿಕೆಯಾಗಿದೆ.
ಅಕಸ್ಮಾತ್... ವಿಶ್ವರಾಜ್ ಮಾಡಿಸಿದ ನಾಟಕ ಕಳಪೆ ಎಂದೇ ಇಟ್ಟುಕೊಳ್ಳೋಣ. ಕಲಬುರಗಿಯ ಇನ್ನೊಬ್ಬ ನಾಟಕಕಾರರಿಂದ ಹೊಸದಾಗಿ ನಾಟಕ ಬರೆಸಿ ಇದೇ ತಂಡದಿಂದ ಪರಿಷ್ಕೃತ ನಾಟಕ ಮಾಡಿಸಿ ಮರು ಪ್ರದರ್ಶನ ಮಾಡಿಸಬಹುದಾಗಿತ್ತಲ್ಲ. ಆದರೆ ಸಾರಾಸಗಟಾಗಿ ಇಡೀ ನಾಟಕ, ನಿರ್ದೇಶಕ, ರಂಗತಂಡ ಹಾಗೂ ಕಲಾವಿದರನ್ನು ನಿರಾಕರಿಸಿದ್ದು ಯಾವ ಸೀಮೆಯ ನ್ಯಾಯ,?. ಹೋಗಲಿ ಮತ್ತೆ ಹೈಕ ದವರಿಗೆ ನಾಟಕ ಬರೆಯಲು ಅವಕಾಶ ಕೊಟ್ಟರಾ? ಅದೂ ಇಲ್ಲ. ಬೆಳಗಾವಿಯ ಡಿ.ಎಸ್. ಚೌಗಲೆಯವರಿಗೆ ನಾಟಕ ಬರೆಯಲು ವಹಿಸಿದರೆ ಹೊಸಪೇಟೆಯ ಸಹನಾರವರಿಗೆ ನಿರ್ದೇಶನ ಮಾಡಲು ಕೊಡಲಾಯಿತು. ಇದರಿಂದಾಗಿ ಕಲಬುರಗಿಗೆ ಕೊಡಲಾಗಿದ್ದ ಅವಕಾಶವನ್ನು ಬೇರೆ ಪ್ರದೇಶದವರಿಗೆ ಒದಗಿಸಿ ಅನ್ಯಾಯ ಮಾಡಲಾಯಿತು. ಈ ಮೂಲಕ ಕಲಬುರಗಿ ವಿಭಾಗದ ರಂಗಕರ್ಮಿಗಳನ್ನು ಅಯೊಗ್ಯರೆಂದು ಪರೋಕ್ಷವಾಗಿ ಹೇಳಿ ಅವಮಾನಿಸಲಾಯಿತು. ಇಷ್ಟಕ್ಕೂ ಚೌಗಲೆ ಬರೆದ ನಾಟಕವಾದರೂ ಅದ್ಬುತವಾಗಿದೆಯಾ ಅಂದರೆ ಅದೂ ಇಲ್ಲಾ.. ಸಾಕ್ಷಚಿತ್ರ ಮಾದರಿಯ ದುರ್ಭಲ ಸ್ಕ್ರಿಪ್ಟ್ ಆಗಿತ್ತು. ಎನ್ ಎಸ್ ಡಿ ಪದವೀದರೆ ಸಹನಾರವರಿಗೆ ನುರಿತ ಕಲಾವಿದರು ಹಾಗೂ ತಂತ್ರಜ್ಞರನ್ನು ಬಸವಲಿಂಗಯ್ಯನವರು ಆಸಕ್ತಿವಹಿಸಿ ವದಗಿಸಿದ್ದರಿಂದ ತಾಂತ್ರಿಕವಾಗಿ ನಾಟಕ ಚೆನ್ನಾಗಿ ಮೂಡಿಬಂದಿತು.
ಬಸವಲಿಂಗಯ್ಯನವರು ಇಲ್ಲಿ ಸ್ವಜನಪಕ್ಷಪಾತ ಮಾಡಿದ್ದೂ ಸಹ ಆತಂಕಕಾರಿಯೇ ಆಗಿದೆ. ಮೊದಲಿನಿಂದಲೂ ತಮ್ಮ ಮೂಲವಾದ ಎನ್ ಎಸ್ ಡಿ ಮೇಲೆ ಅಪಾರ ಪ್ರೀತಿ ಮತ್ತು ಮಮತೆ ಇರುವ ಬಸವಲಿಂಗಯ್ಯನವರು ಈ ಪರಿಷ್ಕೃತ ನಾಟಕಕ್ಕೆ ಎನ್ ಎಸ್ ಡಿ ನಿರ್ದೇಶಕಿಗೆ ಅವಕಾಶ ಕೊಟ್ಟರು. ನಾನ್ ಅಕಾಡೆಮಿಕ್ ರಂಗ ನಿರ್ದೇಶಕರ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಜೊತೆಗೆ ಈ ನಾಟಕಕ್ಕೆ ಅಗತ್ಯವಿದ್ದ ಬಹುತೇಕ ಕಲಾವಿದರನ್ನೂ ಸಹ ತಮ್ಮ ಎನ್ ಎಸ್ ಡಿ ಬೆಂಗಳೂರು ಸೆಂಟರ್ ನಲ್ಲಿ ತರಬೇತಾದವರನ್ನೇ ಕಳುಹಿಸಿದರು. ತಮ್ಮ ಅಂತರಂಗದ ಗೆಳೆಯ ಚೌಗಲೆಯವರಿಗೆ ನಾಟಕ ಬರೆಯಲು ಕೊಡಲಾಯಿತು. ಕೇಳಿದಷ್ಟು ಹಣವನ್ನು ಖರ್ಚುಮಾಡಲಾಯ್ತು. ಇದೇ ರೀತಿಯ ಸಹಾಯ ಸವಲತ್ತುಗಳನ್ನು ವಿಶ್ವರಾಜ್ ಮತ್ತು ತಂಡದವರಿಗೆ ಕೊಟ್ಟಿದ್ದರೆ ಅತ್ಯುತ್ತಮ ನಾಟಕ ಮೂಡಿ ಬರುತ್ತಿತ್ತು. ಕಲಬುರಗಿಯಂತಹ ಹಿಂದುಳಿದ ಪ್ರದೇಶದ ರಂಗಕರ್ಮಿ ಕಲಾವಿದರಿಗೆ ಪ್ರೋತ್ಸಾಹದಾಯಕವಾಗುತ್ತಿತ್ತು.
ರಂಗರಾಜಕೀಯ ಅಂದ್ರೆ ಇದೇನೇ. ದುರ್ಬಲವಾದವರಿಗೆ ಸವಲತ್ತುಗಳನ್ನು ನಿರಾಕರಿಸಿ ಅವರನ್ನು ಅಯೋಗ್ಯರು ಎಂದು ಸಾಬೀತುಪಡಿಸಿ, ತಮಗೆ ಬೇಕಾದವರಿಗೆ ಅವಕಾಶಗಳ ಜೊತೆಗೆ ಸರ್ವ ಸವಲತ್ತುಗಳನ್ನೂ ಒದಗಿಸಿ ತಾವು ಸಮರ್ಥರು ಎಂದು ಸಾಬೀತುಪಡಿಸಿಕೊಳ್ಳುವ ಶ್ರೇಷ್ಠತೆಯ ವ್ಯಸನಪೀಡಿತರಿಂದಲೇ ದುರ್ಬಲರು ಅಶಕ್ತರಾಗುತ್ತಿರುವುದು.. ಸಬಲರು ಸರಕಾರಿ ಅವಕಾಶ ಹಾಗೂ ಸೌಲಭ್ಯಗಳನ್ನು ಪಡೆದು ಮೆರೆಯುತ್ತಿರುವುದು.
ಒಂದು ಮನೆಗೆ ಬಣ್ಣ ಹಚ್ಚುವವನು ಅರ್ಧಕ್ಕೆ ನಿಲ್ಲಿಸಿದರೆ ಇನ್ನೊಬ್ಬ ಬಂದು ಆ ಕೆಲಸ ಮಾಡಲಾರ. ಕೂಲಿ ಕಾರ್ಮಿಕರಲ್ಲಿ ಆ ರೀತಿಯ ಅಘೊಷಿತ ಒಪ್ಪಂದವಿರುತ್ತದೆ. ಅವರಲ್ಲಿರುವಷ್ಟೂ ಮಾನವೀಯತೆ ಹಾಗೂ ವೃತ್ತಿಪರತೆ ಸೋ ಕಾಲ್ಡ್ ರಂಗಕರ್ಮಿಗಳಿಗಿಲ್ಲದೇ ಹೋಯಿತೆ. ಈಗಾಗಲೇ ತಯಾರಾಗಿ ಅರ್ಧಕ್ಕೆ ನಿಂತ ನಾಟಕವನ್ನು ಹಣದಾಸೆಗಾಗಿ ಪೂರ್ಣಗೊಳಿಸಲು ಚೌಗಲೆ ಒಪ್ಪಿಕೊಂಡಿದ್ದೇ ವೃತ್ತಿ ದ್ರೋಹವಾಗಿದೆ. ಬೇಕಾದರೆ ಬೇರೆ ಸರಕಾರಿ ಪ್ರಾಜೆಕ್ಟಿಗೆ ನಾಟಕ ಬರೆದು ಕೊಡಲಿ ಬೇಡವೆಂದವರಾರು. ಆದರೆ ನಿಲ್ಲಿಸಲಾದ ನಾಟಕ ಮುಂದುವರೆಸಲು ಒಪ್ಪಿದ್ದೇ ಅಕ್ಷಮ್ಯ. ಚೌಗಲೆಯವರಿಗೆ, ಸಿ.ಬಸವಲಿಂಗಯ್ಯನವರಿಗೆ ಹಾಗೂ ಡಾ.ಕೆ ವೈ.ಎನ್ ರವರಂತಹ ಆಧುನಿಕ ಸರಕಾರಿ ರಾಜಾಸ್ಥಾನದ ಪಂಡಿತರಿಗೆ ಇಷ್ಟೂ ಗೊತ್ತಾಗಲಿಲ್ಲವೆಂದರೆ ಹೇಗೆ? ಹಿಂದುಳಿದ ಪ್ರದೇಶದ ರಂಗಕರ್ಮಿಗಳ ಹಕ್ಕನ್ನು ಕಿತ್ತುಕೊಳ್ಳಲು ಇವರಿಗೆ ಹೇಗೆ ಮನಸ್ಸು ಬಂತು. ಇವರ ನಾಟಕಗಳ್ಯಾವವೂ ತೋಪಾಗಿಲ್ಲವೇ. ಇವರ ನಾಟಕದ ಮೊದಲ ಪ್ರದರ್ಶನ ಕೆಟ್ಟದಾಗಿ ಬಂದಾಗ ಮುಂದಿನ ಪ್ರದರ್ಶನಗಳನ್ನು ಇವರು ರದ್ದು ಮಾಡಿದ್ದಾರಾ? ಯಾರಾದರೂ ನೆಗಡಿಯಾಯಿತೆಂದು ಮೂಗನ್ನೇ ಕೊಯ್ತಾರಾ?
ರಂಗರಾಜಕೀಯ ಅಂದ್ರೆ ಇದೇನೇ. ದುರ್ಬಲವಾದವರಿಗೆ ಸವಲತ್ತುಗಳನ್ನು ನಿರಾಕರಿಸಿ ಅವರನ್ನು ಅಯೋಗ್ಯರು ಎಂದು ಸಾಬೀತುಪಡಿಸಿ, ತಮಗೆ ಬೇಕಾದವರಿಗೆ ಅವಕಾಶಗಳ ಜೊತೆಗೆ ಸರ್ವ ಸವಲತ್ತುಗಳನ್ನೂ ಒದಗಿಸಿ ತಾವು ಸಮರ್ಥರು ಎಂದು ಸಾಬೀತುಪಡಿಸಿಕೊಳ್ಳುವ ಶ್ರೇಷ್ಠತೆಯ ವ್ಯಸನಪೀಡಿತರಿಂದಲೇ ದುರ್ಬಲರು ಅಶಕ್ತರಾಗುತ್ತಿರುವುದು.. ಸಬಲರು ಸರಕಾರಿ ಅವಕಾಶ ಹಾಗೂ ಸೌಲಭ್ಯಗಳನ್ನು ಪಡೆದು ಮೆರೆಯುತ್ತಿರುವುದು.
ಒಂದು ಮನೆಗೆ ಬಣ್ಣ ಹಚ್ಚುವವನು ಅರ್ಧಕ್ಕೆ ನಿಲ್ಲಿಸಿದರೆ ಇನ್ನೊಬ್ಬ ಬಂದು ಆ ಕೆಲಸ ಮಾಡಲಾರ. ಕೂಲಿ ಕಾರ್ಮಿಕರಲ್ಲಿ ಆ ರೀತಿಯ ಅಘೊಷಿತ ಒಪ್ಪಂದವಿರುತ್ತದೆ. ಅವರಲ್ಲಿರುವಷ್ಟೂ ಮಾನವೀಯತೆ ಹಾಗೂ ವೃತ್ತಿಪರತೆ ಸೋ ಕಾಲ್ಡ್ ರಂಗಕರ್ಮಿಗಳಿಗಿಲ್ಲದೇ ಹೋಯಿತೆ. ಈಗಾಗಲೇ ತಯಾರಾಗಿ ಅರ್ಧಕ್ಕೆ ನಿಂತ ನಾಟಕವನ್ನು ಹಣದಾಸೆಗಾಗಿ ಪೂರ್ಣಗೊಳಿಸಲು ಚೌಗಲೆ ಒಪ್ಪಿಕೊಂಡಿದ್ದೇ ವೃತ್ತಿ ದ್ರೋಹವಾಗಿದೆ. ಬೇಕಾದರೆ ಬೇರೆ ಸರಕಾರಿ ಪ್ರಾಜೆಕ್ಟಿಗೆ ನಾಟಕ ಬರೆದು ಕೊಡಲಿ ಬೇಡವೆಂದವರಾರು. ಆದರೆ ನಿಲ್ಲಿಸಲಾದ ನಾಟಕ ಮುಂದುವರೆಸಲು ಒಪ್ಪಿದ್ದೇ ಅಕ್ಷಮ್ಯ. ಚೌಗಲೆಯವರಿಗೆ, ಸಿ.ಬಸವಲಿಂಗಯ್ಯನವರಿಗೆ ಹಾಗೂ ಡಾ.ಕೆ ವೈ.ಎನ್ ರವರಂತಹ ಆಧುನಿಕ ಸರಕಾರಿ ರಾಜಾಸ್ಥಾನದ ಪಂಡಿತರಿಗೆ ಇಷ್ಟೂ ಗೊತ್ತಾಗಲಿಲ್ಲವೆಂದರೆ ಹೇಗೆ? ಹಿಂದುಳಿದ ಪ್ರದೇಶದ ರಂಗಕರ್ಮಿಗಳ ಹಕ್ಕನ್ನು ಕಿತ್ತುಕೊಳ್ಳಲು ಇವರಿಗೆ ಹೇಗೆ ಮನಸ್ಸು ಬಂತು. ಇವರ ನಾಟಕಗಳ್ಯಾವವೂ ತೋಪಾಗಿಲ್ಲವೇ. ಇವರ ನಾಟಕದ ಮೊದಲ ಪ್ರದರ್ಶನ ಕೆಟ್ಟದಾಗಿ ಬಂದಾಗ ಮುಂದಿನ ಪ್ರದರ್ಶನಗಳನ್ನು ಇವರು ರದ್ದು ಮಾಡಿದ್ದಾರಾ? ಯಾರಾದರೂ ನೆಗಡಿಯಾಯಿತೆಂದು ಮೂಗನ್ನೇ ಕೊಯ್ತಾರಾ?
ಈ ರಂಗರಾಜಕೀಯದಿಂದ ಬೇಸತ್ತುಕೊಂಡ ವಿಶ್ವರಾಜ್ ವಿಫಲ ರಂಗಕರ್ಮಿಗಳಿಂದ ಹೊಸ ನಾಟಕ "ಕೊಂದವರಾರು" ಎಂದು ಅವಲತ್ತುಕೊಂಡಿದ್ದು. ಈಗಿರುವ ಪ್ರಶ್ನೆ ಕಲಬುರಗಿ ರಂಗತಂಡಕ್ಕೆ ಸಕಾಲಕ್ಕೆ ರಂಗಪಠ್ಯ ಹಾಗೂ ಅಗತ್ಯ ಸವಲತ್ತು ಒದಗಿಸದೇ ಅರಸು ನಾಟಕವನ್ನು ಕೊಂದವರಾರು? ಎನ್ನುವುದು. ಆ ನಾಟಕದ ಅಕಾಲಿಕ ಸಾವಿನ ಹೊಣೆಯನ್ನು ಸಿ.ಬಸವಲಿಂಗಯ್ಯ, ಡಾ.ಕೆವೈಎನ್ ಹಾಗೂ ಇಲಾಖೆ ನಿರ್ದೇಶಕ ದಯಾನಂದರವರು ಹೊರಬೇಕು. ಸೂತಕದ ಮನೆಯ ಅವಕಾಶವನ್ನು ಕಿತ್ತುಕೊಂಡ ನಾಟಕಕಾರ ಡಿ.ಎಸ್.ಚೌಗಲೆ, ನಿರ್ದೇಶಕಿ ಸಹನಾ ಈ ಇಬ್ಬರೂ ಈ ಕೊಲೆಯಲ್ಲಿ ಸಮಾನ ಪಾಲುದಾರರೇ. ಸರಕಾರವೆನ್ನುವ ಹುಚ್ಚು ಮುಂಡೇ ಮದುವೇಲಿ ಮುಂಡಾಯಿಸಿದವನೇ ಜಾಣ. ಈ ಜಾಣತನ ಕಲಬುರಗಿ ಜನಕ್ಕೆ ಗೊತ್ತಾಗೋದಿಲ್ಲ. ಬೆಂಗಳೂರಿನ ಕೆಲವು ಸರಕಾರಿ ಕೃಪಾಪೋಷಿತ ರಂಗಕರ್ಮಿಗಳ ನಾಜೂಕು ರಾಜಕೀಯದ ಒಳಹುನ್ನಾರು ಪಾಪ ದೂರದ ಊರಿನಲ್ಲಿರುವ ವಿಶ್ವರಾಜ್ ಹಾಗೂ ತಂಡದವರಿಗೆ ಅದು ಹೇಗೆ ತಿಳಿಯಬೇಕು. ಅಂತೂ ರಂಗನಾಟಕವೊಂದನ್ನು ಕೊಂದವರು ಸರಕಾರಿ ಸವಲತ್ತು ಪಡೆದು ಸಂಭ್ರಮಿಸಿದರು. ಕೊಲ್ಲಿಸಿಕೊಂಡವರು ಅವಕಾಶವಂಚಿತರಾಗಿ ಅಸಹಾಯಕರಾದರು. ಇದೇ ಪ್ರಸ್ತುತ ರಂಗರಾಜಕೀಯದ ಮಹಾ ಮಸಲತ್ತು. ಇನ್ನಾದರೂ ಉಳಿದವರು ಅರ್ಥಮಾಡಿಕೊಳ್ಳಬೇಕಿದೆ ಅವಕಾಶವಾದಿ ರಂಗಕರ್ಮಿಗಳ ಅಸಲೀಯತ್ತು.
ಸಧ್ಯ ವಿಶ್ವರಾಜ್ ಹಾಗೂ ಅವರ ತಂಡ ಅವಮಾನವನ್ನು ಅನುಭವಿಸಿ ಮಾನಸಿಕ ಖಿನ್ನತೆಯಿಂದ ಹೊರಬಂದಿದೆ. ವಿಫಲತೆಯ ಆರೋಪವನ್ನು ಸವಾಲಾಗಿ ಸ್ವೀಕರಿಸಿ ಆಗಸ್ಟ್ 31 ರಿಂದ ನಾಲ್ಕು ದಿನಗಳ ಕಲಬುರ್ಗಿ ರಂಗೋತ್ಸವವನ್ನು ಕಲಬುರಗಿಯಲ್ಲಿ ಆಯೋಜಿಸಿದೆ. ಮೊದಲ ದಿನವೇ ಪ್ರಸನ್ನರವರು ರಚಿಸಿದ 'ಕೊಂದವರಾರು' ನಾಟಕವು ವಿಶ್ವರಾಜ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ತಮ್ಮ ಅರಸು ನಾಟಕವನ್ನು ಕೊಂದವರಲ್ಲಿ ಪ್ರಮುಖ ಪಾತ್ರವಹಿಸಿದ ಸಿ.ಬಸವಲಿಂಗಯ್ಯನವರನ್ನೇ ಈ ನಾಟಕೋತ್ಸವದ ಉದ್ಘಾಟನೆಗೆ ಆಹ್ವಾನಿಸಿ " ಕೊಂದವರಾರು" ನಾಟಕವನ್ನು ತೋರಿಸಿ ಸಾಂಕೇತಿಕವಾಗಿ ಪ್ರತಿಭಟನೆ ಸಲ್ಲಿಸಲಾಯ್ತು. ಕೊಂದರೂ ಮರುಹುಟ್ಟು ಪಡೆಯಬಲ್ಲೆವು ಎಂಬುದನ್ನು ಗಂಡು ಭೂಮಿ ಕಲಬುರಗಿಯ ರಂಗಕರ್ಮಿಗಳು ಸಾಬೀತು ಪಡಿಸಿದರು.
ರಂಗಭೂಮಿ ಅಂದರೇ ಹೀಗೆ. ರಂಗರಾಜಕೀಯದಿಂದ ದಮನ ಹಾಗೂ ಅವಮಾನಕ್ಕೊಳಗಾದಾಗಲೆಲ್ಲಾ ಮತ್ತೆ ಪುಟಿದೆದ್ದು ನಿಲ್ಲುತ್ತದೆ. ಅವಕಾಶವಾದಿ ರಂಗದಲ್ಲಾಳಿ ಗುತ್ತಿಗೆದಾರರ ತಂತ್ರ ಕುತಂತ್ರಗಳ ಅರಿವಿಲ್ಲದೇ ನಾಡಿನಾದ್ಯಂತ ನಿಸ್ವಾರ್ಥದಿಂದ ನಾಟಕವನ್ನು ಕಟ್ಟುತ್ತಿರುವವರಿಂದಲೇ ರಂಗಭೂಮಿ ಇನ್ನೂ ಜೀವಂತವಾಗಿದೆ... ಜೀವಂತವಾಗಿರಬೇಕು....
- ಶಶಿಕಾಂತ ಯಡಹಳ್ಳಿ
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ