ಶುಕ್ರವಾರ, ಅಕ್ಟೋಬರ್ 14, 2016

ತಹ ತಹ .....4 ದಲಿತ ಕಲಾವಿದರಿಗಿಲ್ಲಾ ಅಕ್ಕನ ಭಾಗ್ಯ :

ತಹ ತಹ .....4


ಇನ್ನೂ ಒಂದು ವಾರ ಕೂಡಾ ಉಳಿದಿಲ್ಲಾ ನಮ್ಮ ದಲಿತ ಕಲಾವಿದ ಬಂಧುಗಳು ಅಮೇರಿಕಕ್ಕೆ ಹೊಗೋದಿಕ್ಕೆ. ಅಕ್ಕ ಸಮ್ಮೇಳನ ಸೆಪ್ಟಂಬರ್ 2 ರಿಂದ 5 ವರೆಗೆ ಅಮೇರಿಕದಲ್ಲಿ ನಡೀತಾಯಿದೆ. ಪ್ರತಿ ವರ್ಷ ಯಾರ್ಯಾರೊ ಕಲಾವಿದರು ರೆಕಮೆಂಡೇಶನ್ ಮೇಲೆ ಅಕ್ಕನಲ್ಲಿಗೆ ಹೋಗಿ ಫಾರೆನ್ ರಿಟರ್ನ ಆಗಿ ಅಂತರಾಷ್ಟ್ರೀಯ ಕಲಾವಿದರಾಗುತ್ತಿದ್ದರು. 

ಸಲ ಅಹಿಂದ ಪರ ಒಲವುಳ್ಳ ಸಿಎಂ ಸಿದ್ದೂ ಸಾಹೇಬರು ಹೆಂಗೂ ಅಕ್ಕನಲ್ಲಿಗೆ ಕಲಾವಿದರು ಹೋಗೋದೆ ಆದ್ರೆ ದಲಿತರೇ ಹೋಗಿ ಬರ್ಲಿ... ಪಾಪ ಅವ್ರೆಲ್ಲಾ ತಮ್ಮ ಜೀವಮಾನದಾಗ ಯಾವಾಗ ಅಮೇರಿಕ ನೋಡ್ಬೇಕು... ಅಂತಂದು ಒಂದಲ್ಲಾ ಒಂಬತ್ತಲ್ಲಾ ಬರೋಬ್ಬರಿ ತೊಂಬತ್ತು ದಲಿತ ವರ್ಗದ ಕಲಾವಿದರನ್ನು ಕಳಿಸಲು ಮೂರು ತಿಂಗಳ ಹಿಂದೇನೇ ಆರ್ಡರ್ ಮಾಡಿದ್ರು...  ಮೇಲ್ಜಾತಿ ಅಧಿಕಾರಿಗಳು ಒಳಗೊಳಗೆ ಬೆಂಕಿ ಆದ್ರೂ ಮೇಲ್ಮೆಲೆ ತಣ್ಣಗೆ ನಕ್ಕಂತೆ ಮಾಡಿ ಹಂಗೂ ಹಿಂಗೂ ಕಲಾವಿದರನ್ನ ಸೋಸಿ ತೆಗೆದು ಆಯ್ಕೆ ಮಾಡೇ ಬಿಟ್ರು. ದೇವರss ಹೇಳಿದ ಮೇಲೆ ಪೂಜಾರಿಗಳು ಮಾಡಲ್ಲಾ ಅಂತಾ ಹೇಳಾಕಾಗಾಕಿಲ್ವಲ್ಲಾ. 

ಶಾನೇ ಖುಷಿಯಾದ ನಮ್ಮ ದಲಿತ ಕಲಾ ಬಾಂಧವರು ಹೊಸಾ ಕಾಸ್ಟೂಮ್ಸ್ ಹೊಲಿಸಿ  ಅಕ್ಕನ ಮನೆಗೆ ಹೋಗೋದಿಕ್ಕೆ ಸಿದ್ದರಾಗಿ ವಿಮಾನಾ ಹತ್ತೋಕೆ ಕಾಯ್ತಾ ಕುಂತವ್ರೆ... ಕೆಲ್ಸಾ ಬಗಿಸಿ ಬಿಟ್ಟು ದಿನಾ ರಿಹರ್ಸಲ್ಸ್ ಮಾಡ್ತಾವ್ರೆ....ಆದರೆ ಅವ್ರಿಗಿನ್ನೂ ಗೊತ್ತಿಲ್ಲ ನಮ್ಮ ಸರಕಾರಿ ಇಲಾಖೆಗಳ ಪೂಜಾರಿಗಳ ಅಸಲಿ ಹಕೀಕತ್ತು... ಸಮಾಜ ಕಲ್ಯಾಣ ಇಲಾಖೆ ಕಲಾವಿದರ ಕರ್ಚು ವೆಚ್ಚ ಕೊಡ್ತದೆ.. ಸಂಸ್ಕೃತಿ ಇಲಾಖೆ ಎಲ್ಲಾನೂ ಆರೆಂಜ್ ಮಾಡ್ತದೆ. ಈಗ ನೋಡಿದ್ರೆ ಇನ್ನೂ ಏನೂ ಆಗೇ ಇಲ್ಲಾ. ಉದಾಸೀನಕ್ಕೆ ಮೊದಲೇ ನಮ್ಮ ಅಧಿಕಾರಿಗಳು ಜಗತ್ಪ್ರದ್ದಿ ಪಡೆದವ್ರು. ಇಲಾಖೆಯವ್ರು ಇಲಾಖೆ ಮೇಲೆ... ಇವ್ರು ಅವರ ಮೇಲೆ ಗೂಬೆ ಕೂಡಸ್ತಾ ಕಾಲಹರಣ ಮಾಡಿದ್ದೇ ಸಾಧನೆ ಆಯ್ತು ಆದರೆ ಕಲಾವಿದರಿಗೆ ಅಧೀಕೃತ ಅನುಮತಿ ಸಿಗಲೇ ಇಲ್ಲ. ನಿಮ್ಮ 'ಮುಖಾ ಮುಚ್ಚಾ' ಅಂತ ಕಲಾವಿದರು ಬೈದು ಬಿಟ್ಟಾರು ಅಂತಾ ಅಂಜಿದ ಸರಕಾರವೇ ಮುತುವರ್ಜಿ ವಹಿಸಿ ಅನುಮತಿಯೇನೋ ಕೊಟ್ಟು ಪುಣ್ಯಾ ಕಟ್ಕೊಳ್ತು. ಆದರೆ ಸರಕಾರ ಹೇಳಿದ್ದು ಅಮೇರಿಕಸ ಸರಕಾರ ಕೇಳ್ಬೇಕಲ್ಲಾ. ದೇಶಕ್ಕ ಹೋಗಬೇಕಂದ್ರ ವೀಸಾ ಅನ್ನೋದು ಬೇಕಬೇಕಲ್ಲಾ. ಇನ್ನೂ ಅದs ರೆಡಿ ಆಗಿಲ್ಲ.

ಎಲ್ಲಾ ಐತಿ ಆದ್ರ ಅದss ಇಲ್ಲದಂಗ್ ಆಗೈತಿ. ಇನ್ನ ಬಾಕಿ ಇರೂದ ಆರಂದ್ರ ಆರs ದಿನ. ಪ್ರತಿಯೊಬ್ಬರ ವೀಸಾ ವೆರಿಫಿಕೇಶನ್ ಮಾಡೋ ದಿನಾನೇ ಇನ್ನೂ ನಿಕ್ಕಿ ಆಗಿಲ್ಲ... ಇನ್ನು ಅಕ್ಕನತ್ರ ಹೊಗೋದು ಹೆಂಗ್ ಪಕ್ಕಾ ಆಗತೈತಿವೀಸಾ ವಿಚಾರಣೆಗೆ ತಾರೀಕು ನಿಗಧಿಯಾಗಿ... ಅದು ಅಪ್ರೂವ್ ಆಗಿ... ವಿಚಾರಣೆ ಮುಗಿದು... ವೀಸಾ ಸಿಕ್ಕು ನಮ್ಮ ಕಲಾವಿದರು ವಿಮಾನ ಏರೂದ್ಯಾವಾಗ... ಅಮೇರಿಕ ನೋಡೂದ್ಯಾವಾಗ.... ಏನೊಂದು ತಿಳಿಲಾರದ ಮುಗ್ದ ದಲಿತ ಕಲಾಬಾಂಧವರು ಆಕಾಸಾ ನೋಡ್ತಾ ಕುಂತವ್ರೆ.. ಅಧಿಕಾರಿಗಳು ಎಸಿ ರೂಂಗಳಲ್ಲಿ ಕುಂತು ಅಕ್ಕನ ಬಿಟ್ಟು ಅಕ್ಕಪಕ್ಕದ ಕೆಲ್ಸದಲ್ಲಿ ಸುಖಾಸುಮ್ಮನೆ ಬ್ಯೂಜಿ ಇದ್ದೀವಿ ಅಂತಾ ತೋರಿಸ್ಕೋಳ್ತಿದ್ದಾರೆ. ದೇವರು ಕೊಟ್ರೂ ಪೂಜಾರಿ ಉದಾಸೀನ ಮಾಡಿದ್ರೆ ಯಾರ ತಪ್ಪು. ಇನ್ನಾರು ದಿನದೊಳಗ ವೀಸಾ ಗೀಸಾ ರೆಡಿಯಾಗದಿದ್ರ ಎಲ್ಲಾ ಕಲಾವಿದರೂ ಇಲಾಖೆ ಮುಂದ ಕೂತು ಉರಿಮಾರಮ್ಮನ ಹಾಗೆ  "ಇವ್ರೀಗೆ ಹಾವಾದ್ರೂ ಕಚ್ಚಬಾರ್ದಾ.. ಚೇಳಾದ್ರೂ ಕುಕ್ಕಬಾರದಾ... ನಾಲ್ಕಾರು ಜ್ವರಾ ಬಂದು ನರಳಾಡಿ ಸಾಯಬಾರ್ದಾ.. ಕಳ್ರು ಇವ್ರ ಮನೆ ತೊಳಯಾ ಅಕ್ಕನ ಹತ್ರ ಕಳಸಲಿಲ್ಲ ತಂಗೆವ್ವಾ ತಂದಾನೆ ತಾನಾನಾ" ಅಂತಾ ಕೋರಸ್ ದ್ವನಿಯಲ್ಲಿ ಹಾಡೊದಂತೂ ಗ್ಯಾರಂಟಿ. ಆದರ ಈಗಿನ ಇಲಾಖೆ ಸಾಹೇಬರುಗಳು ಕಲಾವಿದರನ್ನು ರಪ್ತು ಮಾಡೋಕೆ ಮಾಡಿಕೊಂಡ ಆಮೆಗತಿ ತಯಾರಿ ನೋಡಿದ್ರೆ ಕಲಾತಂಡಗಳು ಅಕ್ಕನ್ನ ಮರೆತು ಮಲೆಮಾದೆಶನ ನಿಂದಾಸ್ತುತಿಯ ಹಾಡು ಕುಣಿತ ಪ್ರ್ಯಾಕ್ಟಿಸ್ ಮಾಡೋದೇ ವಾಸಿ ಅನ್ಸುತ್ತೆ... 
'
ನಿರಾಸೆಯಿಂದ ಆಕಾಸದ ಕಡೆ ಮುಖ ಮಾಡಿ ಆಗೊಮ್ಮೆ ಈಗೊಮ್ಮೆ ಹಾರಿ ಹೋಗ್ತಿರೋ ವಿಮಾನ ನೋಡಿ ತಾವ್ಯಾವಾಗ ಅಂತಾದರಾಗ ಕೂತು ಹೊಗೋದು ಅಂತಾ ಕಲಾವಿದರು ಕನ್ಸು ಕಾಣ್ತಾನೇ ಔರೆ...  ಸರಕಾರ ದೊಡ್ಡ ಮನಸು ಮಾಡೇತಿ.. ಅದರ ಸಾಹೇಬರುಗಳು ಒಂಚೂರು ಜಾಸ್ತಿ ಮನಸ್ ಮಾಡ್ಬೆಕಾಗೈತೆ. ತೊಂಬತ್ತು ಜನ ದಲಿತ ಕಲಾವಿದರಿಗೆ ನಿರಾಸೆ ಅನ್ನೋದು ಆಗದಂಗ್ ನೋಡ್ಕೋಬೇಕಾಗೈತಿ. ಅಷ್ಟರೊಳಗ ಯಾವುದಾದ್ರೂ ಪವಾಡ ನಡದ್ರ ನಮ್ಮ ಕಲಾವಿದರು ಅಮೇರಿಕ ನೋಡ್ಬೋದು... ಅಕ್ಕನ ಪಕ್ಕ ಕೂತು ಹಾಡು ಕುಣಿತ ಮಾಡ್ಬೋದು. ಅಂತಾ ಪವಾಡ ಆದಷ್ಟು ಬೇಗ ಆಗಲಿ ಅನ್ನೂದ ನಮ್ದು ಎಲ್ಲಾರ್ದೂ ಆಶಾ ಐತೆ... ಅಲ್ಲಿವರೆಗೂ ಹಾಡನ್ನ ಕಲಾವಿದರು ಹಾಡ್ತಾ ಇರಲಿ...

'
ಅಕ್ಕಾ ನಿನ್ನತ್ರಾ ಬರೋಕೆ ವೀಸಾ ಸಿಗ್ಲಿಲ್ವೆ... ದೇವರು ಕೊಟ್ರು ಪೂಜಾರಿ ವರಾ ಕೊಡ್ಲಿಲ್ವೆ' ಅನ್ನೋ ಪ್ಯಾಥೋ ಸಾಂಗನ್ನು ಪ್ಯಾರಲಲ್ಲಾಗಿ ಕಲಾ ತಂಡಗಳು ತಯಾರಿ ಮಾಡ್ಕೋಳ್ಳೋದು ಒಳ್ಳೆದು.

ಸಾಹೇಬರುಗಳ ಅಸಹಕಾರಕ್ಕೆ ಹೇಳಿ ಜೈಕಾರ... ಜೈ..



- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ